ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎತ್ತುಗಳಿಗೆ ವಿಶೇಷವಾಗಿ ಅಲಂಕರಿಸಿ ಮೆರವಣಿಗೆ: ಕಾಳುಬಂಡಿ ಓಟದ ಸ್ಪರ್ಧೆ

ಕಲಬುರಗಿ/ ಚಿತ್ತಾಪುರ: ಮುಂಗಾರು ಬಿತ್ತನೆ ಸಮಯದಲ್ಲಿ ಬರುವ ರೈತರ ಹಬ್ಬ ಕಾರಹುಣ್ಣಿಮೆ ಹಬ್ಬವನ್ನು ತಾಲೂಕಿನಾದ್ಯಂತ ರೈತರು ತಮ್ಮ ತಮ್ಮ ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿ ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರು.
ಹುಣ್ಣಿಮೆ ಹಿಂದಿನ ದಿನ ದನಕರು, ಎತ್ತುಗಳನ್ನು ಕಟ್ಟುವ ಕೊಟ್ಟಿಗೆಗಳ ಸ್ವಚ್ಛತೆ, ಎತ್ತುಗಳ ಕೊಂಬು ಕೆತ್ತಿ ಚೂಪಾಗಿ ಮಾಡುವುದು, ಕೃಷಿ ಪರಿಕರಗಳ ಪೂಜೆ ನಡೆಯಿತು. ಹೊನ್ನಹುಗ್ಗಿಯ ಅಂಗವಾಗಿ ಜಾನುವಾರುಗಳಿಗೆ ಪೂಜೆ, ಆರತಿ, ನೈವೇದ್ಯ ಅರ್ಪಿಸಿ ತಿನ್ನಿಸುವ, ಕೋಳಿ ಮೊಟ್ಟೆಯ ಜೊತೆಗೆ ಇಂದು ಕುಡಿಸುವ ಸಂಪ್ರದಾಯದ ಆಚರಣೆ ಜರುಗಿತು.
ಎತ್ತುಗಳಿಗೆ ಮುಗುಡಾ, ಮುಗರಾಣಿ ದಾರ ಸಿದ್ಧ ಮಾಡಿಕೊಂಡು ಬಣ್ಣದಲ್ಲಿ ಅದ್ದುವ, ಬಣ್ಣ ಬಣ್ಣದ ಪ್ಲಾಸ್ಟಿಕ್ ವೈರ್‌ ಸುತ್ತುವ ಕೆಲಸವನ್ನು ರೈತರು ಸಂಜೆಯಿಂದ ರಾತ್ರಿವರೆಗೆ ಮಾಡಿದರು.
ಹಬ್ಬದ ಆಚರಣೆಗೆ ಬೇಕಾಗುವ ಸಾಮಾನುಗಳ ಖರೀದಿ ಭರದಿಂದ ನಡೆಯಿತು.
ಬುಧವಾರ ಬೆಳಗ್ಗೆ ಎತ್ತುಗಳನ್ನು ತಮ್ಮ ಗ್ರಾಮಗಳ ಸಮೀಪದ ಬಾವಿ, ನದಿ, ಹಳ್ಳಗಳಿಗೆ ಹೊಡೆದುಕೊಂಡು ಹೋಗಿ ಸ್ವಚ್ಛವಾಗಿ ಮೈ ತೊಳೆದು ಕೊಂಬುಗಳಿಗೆ ತಮಗಿಷ್ಟದ ಆಯಿಲ್ ಪೇಂಟ್ ಹಾಗೂ ಮೈಗೆ ವಿವಿಧ ಬಣ್ಣಗಳನ್ನು ಹಚ್ಚಿದರು. ಹಣೆಗೆ ಬಾಸಿಂಗ, ಹೂವು, ಕೊರಳಿಗೆ ಗೆಜ್ಜೆ ಕಟ್ಟಿ ವಿಶೇಷವಾಗಿ ಅಲಂಕರಿಸಿ ಮನೆಯವರೆಗೆ ಹಲಗಿ, ಬಾಜಾಗಳೊಂದಿಗೆ ಎತ್ತುಗಳ ಮೆರವಣಿಗೆ ಮಾಡಿದರು.
ಎತ್ತುಗಳ ಮೆರವಣಿಗೆಯಲ್ಲಿ ರೈತರು ಬಾರಕೋಲಿನ ಆಟ, ಬಡಿಗೆಯಾಟ, ಪಟ್ಯಾ ತಿರುವುದು, ಹಲಗಿ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಚಿಕ್ಕ ಮಕ್ಕಳು ಕುಣಿದು ಕುಪ್ಪಳಿಸಿದರು. ಮನೆಗೆ ಬಂದ ಎತ್ತುಗಳಿಗೆ ಮಹಿಳೆಯರು ಪಾದಪೂಜೆ, ಆರತಿ ಬೆಳಗಿ ಮೀಸಲು ನೈವೇದ್ಯದ ಹೋಳಿಗೆ, ಅನ್ನ ತಿನ್ನಿಸಿ, ಎತ್ತುಗಳ ಅಲಂಕಾರ ನೋಡಿ ಕಣ್ಣುಂಬಿಕೊಂಡು ಖುಷಿ ಪಟ್ಟರು.
ಸಂಜೆ ಸಮಯದಲ್ಲಿ ಚಿಕ್ಕದಾದ ಚಕ್ರಗಳ ಕಾಲುಬಂಡಿ ಓಟದ ಸ್ಪರ್ಧೆ ನಡೆಯಿತು. ರೈತರು ತಮ್ಮ ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಕೂಡಿಸಿ ಓಡಿಸುವ ಮೂಲಕ ಆನಂದಪಟ್ಟರು. ಕಾಳುಬಂಡಿ ಮೇಲೆ ನಿಂತ ವ್ಯಕ್ತಿಯ ಕೂಗಾಟ, ಚೀರಾಟಕ್ಕೆ, ಜೋರಾಗಿ ಹೊಡೆಯುವ ಬಾರುಕೋಲಿನ ಏಟಿಗೆ ಎತ್ತುಗಳು ವೇಗವಾಗಿ ಓಡಿ ಶಕ್ತಿ
ಪ್ರದರ್ಶನ ಮಾಡಿದವು. ಕಾಲುಬಂಡಿಯ ಓಟವು ನೋಡುಗರನ್ನು ಮನರಂಜಿಸಿತು.

ವರದಿ ಮೊಹಮ್ಮದ್ ಅಲಿ, ಚಿತ್ತಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ