
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ದುದ್ದಣಗಿ ವಸ್ತಿ ಹಾಗೂ ಮಿರಗಿ ಗ್ರಾಮಸ್ಥರ ವತಿಯಿಂದ ದಿನಾಂಕ 13-06-2025 ರಂದು ಜೋಡೆತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಪ್ರಥಮ ಬಹುಮಾನವಾಗಿ ಅರ್ಧ ತೊಲಿ ಬಂಗಾರ, ದ್ವಿತೀಯ ಬಹುಮಾನ 11 ತೊಲಿ ಬೆಳ್ಳಿ ಖಡಗ , ತೃತೀಯ ಬಹುಮಾನ 5 ತೊಲಿ ಬೆಳ್ಳಿ ಖಡಗವನ್ನು ನೀಡಲಾಯಿತು.
ಜೋಡಿತ್ತಿನ ಬಂಡಿ ಸ್ಪರ್ಧೆ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ವೇದಮೂರ್ತಿ ಮಡಿವಾಳಯ್ಯ ಹಿರೇಮಠ ವಹಿಸಿದ್ದರು. ಶರಣಪ್ಪ ಘಾಳಿ ಪ್ರಗತಿಪರ ರೈತರು ಮಿರಗಿ, ಗೌರವ ಅಧ್ಯಕ್ಷರು ಅಣವೀರಪ್ಪ ಕತ್ತಿ ಕಿರಾಣಿ ವ್ಯಾಪಾರಸ್ಥರು ಕಡಣಿ, ಅಧ್ಯಕ್ಷರು ಶರಣಪ್ಪ ಕತ್ತಿ ಆಗ್ರೋ ಮಾಲೀಕರು, ಮಹಾಂತೇಶ ಕತ್ತಿ ಹೆಸ್ಕಾಂ ಸಲಹಾ ಸಮಿತಿ ಸದಸ್ಯರು, ಮಲ್ಲು ಕೆಸರಟ್ಟಿ, ಹಸಿಗೆ ನೀರು ಸಂಗಣ್ಣ ಯಾತನೂರು, ಎತ್ತಿನ ಬಂಡಿ ಪೂಜೆ ಸಿದ್ದಪ್ಪ ಗಾಳಿ ಮತ್ತು ಚಂಗಪ್ಪ ಆಲಮೇಲ, ವಿಶೇಷ ಅಹ್ವಾನಿಕರಾಗಿ ಪರಮಾನಂದ ಬಿರಾದಾರ, ಪ್ರಭು ಹಿಟ್ನಳ್ಳಿ, ಭೀಮಣ್ಣ ಅವಟಿ, ಲಾಲ್ ಸಾಬ್ ಮುಲ್ಲಾ, ಕಡಣಿ ಮತ್ತು ಮಿರಗಿ, ದುಡ್ಡಣಗಿ ವಸ್ತಿ ಸುತ್ತ ಮುತ್ತಲಿನ ಗ್ರಾಮದ ರೈತರು, ಯುವಕರು ಭಾಗಿಯಾದರು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಅನಿಲ ಕುದರಿ ಸಾಕಿನ ಐರಸಂಗ ದ್ವಿತೀಯ ಬಹುಮಾನ ಮಾರಾಯಸಿದ್ದ ಪೂಜಾರಿ, ಸಾಕಿನ ಮಂಗಳೂರ ತೃತೀಯ ಬಹುಮಾನ ಶಿವಲಿಂಗಪ್ಪ ಹವಳಗಿ ಸಾಕಿನ ಸೋಲಾಪುರ ಪಡೆದರು.
ವರದಿ: ಹಣಮಂತ ಚ. ಕಟಬರ
