ಈ ಭವ್ಯವಾದ ಪ್ರಪಂಚದ ಅಡಿಯಲ್ಲಿ ನಾನು ಬಂದಿರುವುದೇ ನನ್ನ ತಂದೆಯ ಉದಾರದಿಂದ. ನನ್ನ ತಂದೆಯಲ್ಲಿರುವ ಎಲ್ಲಾ ಗುಣಗಳನ್ನು ನಾನು ಬೆಳೆಸಿಕೊಳ್ಳುತ್ತೇನೆ, ಜೊತೆಗೆ ನನ್ನ ತಂದೆ ಕೂಡಾ ನನ್ನನ್ನು ಗಗನೆತ್ತರಕ್ಕೆ ಬೆಳೆಸಲು ಒಂದಿಷ್ಟು ಆಸೆ ಆಕಾಂಕ್ಷಿಗಳನ್ನು ನಾವು ಕಾಣಬಹುದು. ಆ ದೇವರು ಇದ್ದಾನೆ ಏನು ಅನ್ನೋದು ಗೊತ್ತಿಲ್ಲ. ಆದರೆ ಗೊತ್ತಿರುವ ಕಣ್ಣಿನ ಎದುರೇ ಕಾಣುವ ದೇವರು, ನಡೆದಾಡುವ ಜೀವಂತ ದೇವರು.ಅದು ತಂದೆ… ಇವತ್ತಿನ ಸಮಾಜದಲ್ಲಿ ನಾವೆಲ್ಲಾ ಬೆರೆತುಕೊಂಡು ತಂದೆ ಅನ್ನುವ ಸ್ಥಾನವನ್ನು ಮರೆತುಕೊಂಡು ಮುನ್ನುಗುವ ಸಮಾಜದಲ್ಲಿ ಬದುಕುವರು ನಾವು. ಇದೇ ನಮ್ಮ ದುರಾದೃಷ್ಟ. ಅಪ್ಪನಿಗೆ ಏನಾದರೂ ಆದರೆ ಮಗನಿಗೆ ನೋವು ಆಗುವುದಿಲ್ಲ, ಕಾರಣ ಅದೇ ಮಗನಿಗೆ ಏನಾದರೂ ಕಷ್ಟದಲ್ಲಿ ನೋವಿನಲ್ಲಿ ಇದ್ದರೆ, ತಕ್ಷಣದಲ್ಲಿ ತಂದೆಯ ಆತ್ಮಕ್ಕೆ ಮನಸ್ಸಿಗೆ ಕಣ್ಣಿನಲ್ಲಿ ನೀರು ಜಾರುವುದು ಸಹಜ. ನಾವು ಯಾವುದೇ ಸ್ಥಿತಿಗಳಿಗೆ ಇದ್ದರೂ ನಮ್ಮನ್ನು ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆಯಿಂದ, ನನ್ನ ಮಗ ಅನ್ನುವ ಗೌರವದಿಂದ ಮುನ್ನುಗ್ಗಲಿ ಎನ್ನುವ ಭಾವನೆಯ ಏಕೈಕ ದೇವರೆ ತಂದೆ. ನಮ್ಮನ್ನು ಜಗದೆತ್ತರ ಬೆಳೆಸುವಲ್ಲಿ ಮುನ್ನುಗುವ ತಂದೆಯ ಅದ್ಭುತವಾದ ಶಬ್ದಕ್ಕೆ ನಾನು ಸರಿಸಾಟಿ ಇಲ್ಲ. ಇದು ತಂದೆಯ ಅದ್ಭುತವಾದ ಒಂದು ಕೊಡುಗೆ, ತಿನ್ನುವ ಅನ್ನಕ್ಕಾಗಲಿ, ತೊಡುವ ಬಟ್ಟೆಗಾಗಲಿ, ನನ್ನ ಮಗನಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರಿಕೆಯಿಂದ. ನೋಡಿಕೊಂಡು ಬೆಳೆಸುವ ನನ್ನ ತಂದೆ ಬಿಟ್ಟರೆ, ಬೇರೆ ಯಾವ ದೇವರು ಕಾಣಲಾರೆ. ಒಳ್ಳೆಯ ಹೆಜ್ಜೆಯನ್ನು ಇಡುವಂತೆ ಕಲಿಸಿದ್ದ ಗುರು ನನ್ನ ತಂದೆ…..

- ಮಹಾಂತೇಶ ಎಸ್ ಖೈನೂರ
