ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಾಗಲಕೋಟೆ ಜಿಲ್ಲೆಯ ಸರ್ವ ಕಲಾವಿದರ ಸಭೆ

ದಿ. 16 ರಂದು (ಸಭೆಗೆ ಸಂದರ್ಶನ ಪತ್ರ ತರಲು ಕರೆ)

ಪದ್ಮಶ್ರೀ ಡಾ. ಸುಗತೇಕರಗೆ ಅಭಿನಂದನ ಗೌರವ ಸನ್ಮಾನ

ಬಾಗಲಕೋಟೆ/ಮುಧೋಳ : 14/06/25 ಕರ್ನಾಟಕ ಜಾನಪದ ಅಕಾಡೆಮಿ ಜನಪದ ಶ್ರೀ ಕರ್ನಾಟಕ ರಾಜ್ಯೋತ್ಸವ ಹಂಪಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳನ್ನ ಪಡೆದು ಭಾರತ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿ ಜಿಲ್ಲೆಗೆ ಗೌರವ ತಂದಿರುವ ಹೆಮ್ಮೆಯ ಕಲಾವಿದ ಬಾಗಲಕೋಟೆಯ ಡಾ.ವೆಂಕಪ್ಪ ಸುಗತೇಕರ್ ಅವರಿಗೆ ಸೋಮವಾರ ದಿನಾಂಕ 16 ರಂದು ಗದ್ದನಕೇರಿಯ ಸದ್ಗುರು ಲಡ್ಡು ಮುತ್ಯಾನ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದಿಂದ ಅಭಿನಂದನೆಯನ್ನು ಸಲ್ಲಿಸಲಾಗುವದೆಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪವಿತ್ರ ಜಕ್ಕಪ್ಪನವರ ತಿಳಿಸಿದ್ದಾರೆ. ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಕನ್ನಡ ನಾಡಿನ ಪುಣ್ಯ ಭೂಮಿಯಲ್ಲಿ ಕಲೆ ಸಾಹಿತ್ಯ ಸಂಸ್ಕೃತಿಯ‌ ಪ್ರತೀಕವಾಗಿ ಸೇವೆ ಸಲ್ಲಿಸಿದ ಕಲಾವಿದರ ಹಕ್ಕುಗಳನ್ನ ನ್ಯಾಯಯುತವಾಗಿ ಪಡೆದುಕೊಳ್ಳಲು ಹಕ್ಕೋತಾಯಕ್ಕಾಗಿ ಚಚಿ೯ಸಲು ಜಿಲ್ಲೆಯ ಸರ್ವ ಕಲಾವಿದರ ಸಭೆಯನ್ನು ದಿ.16ರಂದು ಮಧ್ಯಾಹ್ನ 1 ಗಂಟೆಗೆ ಕರೆಯಲಾಗಿದೆ. ಸಭೆಗೆ ಬರುವ ಕಲಾವಿದರು ತಮ್ಮ ಸಂದರ್ಶನ ಪತ್ರವನ್ನು ಕಡ್ಡಾಯವಾಗಿ ತರಬೇಕು ಎಂದ ಅವರು ಕನಾ೯ಟಕ ರಾಜ್ಯ ಸವ೯ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಸಂದರ್ಶನಗೊಂಡ ಎಲ್ಲಾ ಕಲಾವಿದರ ಮಾಶಾಸನವನ್ನು ತ್ವರಿತವಾಗಿ ಬಿಡುಗಡೆಗೊಳಿಸಬೇಕು ಮಾಶಾಸನವನ್ನು 5000ಕ್ಕೆ ಏರಿಸಬೇಕು ಕಲಾವಿದರ ಮಾಶಾಸನದ ವಯೋಮಾನವನ್ನು ತಕ್ಷಣ ಇಳಿಸಬೇಕು ಕಲಾವಿದರ ಮಾಶಾಸನವೂ ಪ್ರತಿ ತಿಂಗಳು ಐದನೇ ತಾರೀಕಿನೊಳಗಾಗಿ ಬಿಡುಗಡೆ ಆಗುತ್ತಿರಬೇಕು ಪ್ರತಿ ಸಂಘ ಸಂಸ್ಥೆಗಳಿಗೆ ಎರಡು ಪ್ರಾಯೋಜನೆ ಕಾರ್ಯಕ್ರಮಗಳನ್ನು ನೀಡಬೇಕು. ಮುಂತಾದ ಹಲವು ವಿಚಾರಗಳನ್ನು ಈ ಸಭೆಯಲ್ಲಿ ಚರ್ಚಿಸಲಾಗುವುದು ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯಗಳನ್ನು ಜಿಲ್ಲಾಧಿಕಾರಿಗಳ ಮುಖೇನ ಸರ್ಕಾರದ ಗಮನಕ್ಕೆ ತರುವ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು.
ಈ ಸಭೆಯಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ಕರಣ್ ಕುಮಾರ್ ಜೈನಾಪುರ, ನಿವೃತ್ತ ಸಹಾಯಕ ನಿರ್ದೇಶಕರಾದ ಶ್ರೀಶೈಲ್ ಕರಿಶಂಕರಿ, ಸಾಮಾಜಿಕ ಕಾರ್ಯಕರ್ತರಾದ ಬಾದಾಮಿಯ ಗೋಪಾಲಕೃಷ್ಣ ದೇಸಾಯಿ, ಪ್ರಚಾರ ಸಮಿತಿಯ ಸಂಚಾಲಕರಾದ ಹನುಮಂತ ಐಹೊಳೆ, ಬಾಗಲಕೋಟೆ ಶ್ರೀಕಾಂತ್ ಬಿಲಕೇರಿ, ಒಕ್ಕೂಟದ ಮುಖ್ಯಸ್ಥರಾದ ಬಾದಾಮಿಯ ಚಿನ್ನಪ್ಪ ಗೌಡ ಜಲಗೇರಿ, ಗುಳೇದಗುಡ್ಡದ ಯಲ್ಲಪ್ಪ ಪೂಜಾರಿ, ಲೋಕಾಪೂರ ವಲಯದ ರಾಮಪ್ಪ ಗಲಗಲಿ, ಬೀಳಗಿಯ ಶಂಕರಪ್ಪ ತಂಬಾಕದ, ಇಲಕಲ್ಲದ ಮಂಜುನಾಥ್ ಹಡಪದ, ಕೆರೂರದ ಶಂಕರ್ ಲಮಾಣಿ, ಅರಕೇರಿಯ ಸದಾಶಿವ ಅಗೋಜಿ ಸೇರಿದಂತೆ ಅನೇಕ ಕಲಾವಿದ ಮುಖಂಡರ ಸಭೆಯಲ್ಲಿ ಸರ್ವ ಕಲಾವಿದರ ಹಿತಾಸಕ್ತಿಯನ್ನು ಇಟ್ಟುಕೊಂಡು ವಿಚಾರಗಳನ್ನು ಮಂಡಿಸಲಾಗುವುದೆಂದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಈ ಸಭೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ