ಬಳ್ಳಾರಿ / ಕಂಪ್ಲಿ : ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವ ಮೂಲಕ ಉಚಿತವಾಗಿ ಪ್ರಾಥಮಿಕ ಕೇಂದ್ರದಲ್ಲಿ ತಪಾಸಣೆ ಮಾಡಿಸಿ ಕೊಳ್ಳುವುದರ ಜೊತೆಗೆ ಅರೋಗ್ಯ ಕಾಪಾಡಲು ಮುಂದಾಗಬೇಕು ಎಂದು ಶಾಸಕ ಜೆ. ಎನ್. ಗಣೇಶ ಹೇಳಿದರು.
ಪಟ್ಟಣದ ಸಾಂಗತ್ರಯ ಪಾಠಶಾಲೆಯಲ್ಲಿ ನರೇಗಾ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಜಿಲ್ಲಾ ಸರ್ವೆಕ್ಷಣಾ ಎನ್. ಸಿ. ಡಿ ಘಟಕದ ಅಶ್ರಯದಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಅಸಾಂಕ್ರಾಮಿಕ ರೋಗಗಳ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯ ಕೇಂದ್ರದಲ್ಲಿ ಖಾಯಿಲೆಗೆ ಸಂಬಂಧಿಸಿದಂತೆ ಎಲ್ಲಾ ಯಂತ್ರೋಪಕರಣಗಳಿವೆ. ಅವುಗಳನ್ನು ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ವೈದ್ಯಾಧಿಕಾರಿ ಡಾ. ಹಾರಿಕಾ ಮಾತನಾಡಿ ಒತ್ತಡ ಜೀವನದ ಜೊತೆಗೆ ಕಲಬೆರಕೆ ಆಹಾರ ಸೇವಿಸುವುದರಿಂದ ರೋಗಗಳು ಕಾಣಿಸಿಕೊಳ್ಳುತ್ತವೇ ತಪ್ಪದೇ ವಾಕಿಂಗ್, ಯೋಗ, ಧ್ಯಾನ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
120 ಜನರಿಗೆ ಉಚಿತ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ.ತರುಣಕುಮಾರ, ಬಸವರಾಜ. ಶುಶ್ರೂಸಕಾಧಿಕಾರಿ ಡಿ.ದೇವಣ್ಣ, ನಂದಿನಿ, ಸಮುದಾಯ ಕೇಂದ್ರದಲ್ಲಿ ಸಿಂಬ್ಬದಿಯವರಾದ ಡಿ.ಎನ್.ಮಹ್ಮಮದ್, ಶೃತಿಕೋರಿ ಚಂದ್ರಶೇಖರ್ ಸೇರಿ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
