ಬಳ್ಳಾರಿ / ಕಂಪ್ಲಿ : ಕಂಪ್ಲಿ ಬೆಳಗೋಡು ರಸ್ತೆಯಲ್ಲಿ ಶನಿವಾರ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳಗೋಡು ನಿವಾಸಿ ಹರೀಶ ತಂದೆ ಬಸಪ್ಪ ಮೃತಪಟ್ಟಿದ್ದಾನೆ.
ಬೈಕ್ ನಲ್ಲಿದ್ದ ಹರೀಶ ತಾಯಿ ಹಾಗೂ ಸಹೋದರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ, ಬಿಮ್ಸ್ ಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಮೃತ ಹರೀಶನು ಭಾವೈಕ್ಯ ಪತ್ರಿಕೆಯ ಸಂಪಾದಕರಾದ ಭಾವೈಕ್ಯ ವೆಂಕಟೇಶ ಅವರ ಸಹೋದರನಾದ ಬಸಪ್ಪನವರ ಮಗ ಎಂದು ತಿಳಿದುಬಂದಿದೆ.
ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್
