ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯಾಕ ನನ್ನ ದೂರುತಿ

ದೂರಾದ ಮ್ಯಾಲು
ಯಾಕ ನನ್ನ ದೂರುತಿ
ಸತ್ತ ಕನಸುಗಳ ಸುತ್ತ
ಮತ್ಯಾಕ ಸುತ್ತುತಿ

ಕೂಡಿ ಕಟ್ಟಿ; ಸುಟ್ಟ
ಭಾವನೆಗಳ ತುರಿ ಬಿಡು ಗೆಳತಿ
ತೇಲಲಿ, ಮುಳುಗಲಿ
ನಿನಗ್ಯಾಕ ಅದರ ಚಿಂತಿ

ಜೋಡಿ ತೊಳುಗಳ
ತೋರೆದಾಗಲೆ ನಿಂತಿತು ಪ್ರೀತಿ
ಒಂದಾಗದ ದಾರಿಯಲಿ
ಬಿಗಿ ಉಸಿರಿಡಿದು ಯಾಕ ಕುಂತಿ

ಕಿತ್ತೆಸೆದು ಬಿಡು
ಹುರುಪಿನಲಿ ಕೊಂಡ ಆ ಮೂಗುತಿ
ಈಡೇರದ ಆಸೆಗಳ
ಆಸರೆಗಾಗಿ ಸುಮ್ಮನ್ಯಾಕ ಕಾಯುತಿ

ನನಸಾಗದ ಕನಸ
ಹೊರತು ಚೆಂದದ ಬದುಕೈತಿ
ಹಿಂತಿರುಗಿ ನೋಡದೆ
ನಿನ್ನಷ್ಟದಂತೆ ಬದುಕಿ ಬಿಡು ಗೆಳತಿ

ಹಸಿರು ಬಳೆಸಿರೆಯುಟ್ಟು
ಬೆಳಗು ಮತ್ತೊಬ್ಬನ ಮನೆಯ ಜ್ಯೋತಿ
ಕುಂಕುಮ ಅರಿಶಿಣ
ನಿರಂತರವಿರಲಿ ನಿನ್ನ ಜೊತಿ

  • ಮಂಜುನಾಥ್ ಮೇಟಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ