ಬಳ್ಳಾರಿ / ಕಂಪ್ಲಿ : ರಸ್ತೆ, ಕಟ್ಟಡ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯದೊಂದಿಗೆ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಮೊದಲ ಧ್ಯೇಯವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ಹಂಪಾದೇವನಹಳ್ಳಿ ಗ್ರಾ. ಪಂ ವ್ಯಾಪ್ತಿಯ ಜವುಕು ಗ್ರಾಮದ ಸರ್ಕಾರಿ ಪ್ರೌಢಶಾಲಾ ಬಳಿಯಲ್ಲಿರುವ ರಸ್ತೆಯಲ್ಲಿ 2024-25ನೇ ಸಾಲಿನ ಕಲ್ಯಾಣ ಪಥ ಯೋಜನೆಯಡಿಯ ಸುಮಾರು 472.40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ದೇವಸಮುದ್ರ ಗ್ರಾಮದ ಎಲ್ಎಲ್ಸಿ ಕಾಲುವೆಯಿಂದ ಜವುಕುವರೆಗಿ ರಸ್ತೆ ಅಭಿವೃದ್ಧಿ ಹಾಗೂ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಸುಮಾರು 14 ಲಕ್ಷ ವೆಚ್ಚದ ಗ್ರಂಥಾಲಯ ನಿರ್ಮಾಣದ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ರೈತರ ರಸ್ತೆಗಳು ಅಭಿವೃದ್ಧಿಯಾದರೆ, ಹೊಲ ಗದ್ದೆಗಳಿಗೆ ಓಡಾಡಲು ಬಹಳಷ್ಟು ಅನುಕೂಲವಾಗಲಿದೆ ಮತ್ತು ಗ್ರಂಥಾಲಯದಿಂದ ಮಕ್ಕಳ ಮತ್ತು ಯುವಕರಿಗೆ ಪುಸ್ತಕದ ಜ್ಞಾನದ ಜತೆಗೆ ವಿದ್ಯಾರ್ಜನೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ. ಪಂ ಸದಸ್ಯರಾದ ಸಿ.ಬಸವರಾಜ, ಎಸ್ ಡಿ ಎಂ ಸಿ ಅಧ್ಯಕ್ಷ ಪಕ್ಕೀರಪ್ಪ, ಪುರಸಭೆ ಸದಸ್ಯ ಸಿ.ಆರ್.ಹನುಮಂತ, ಮುಖಂಡರಾದ ಕೆ.ಷಣ್ಮುಕಪ್ಪ, ಜವುಕು ಮಲ್ಲಿಕಾರ್ಜುನ, ಬಸವರಾಜ, ಯಂಕಪ್ಪ, ರಾಜನಗೌಡ, ಕುಮಾರಸ್ವಾಮಿ, ನೀರಂಟಿ ವಿರೇಶ, ಸಿದ್ದಪ್ಪ, ಜಡೆಪ್ಪ, ಯಂಕೋಬ, ವಿರೇಶ, ಲೋಕೇಶ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
