ಚಿಕ್ಕಮಗಳೂರು / ಕೊಪ್ಪ : ನಗರದಲ್ಲಿ ಶಾಲಾ ಮಕ್ಕಳನ್ನು ಸಾಮರ್ಥ್ಯಕ್ಕಿಂತ ಅಧಿಕ ಸಂಖ್ಯೆಯಲ್ಲಿ ಆಟೋ, ವ್ಯಾನ್ಗಳಲ್ಲಿ ಶಾಲೆ ಕರೆದೊಯ್ಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಅಪಾಯಕಾರಿ ಆಗಿದೆ. ಇದನ್ನು ಮನಗಂಡ ಪೋಲೀಸರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಖುದ್ದು ಪಿಎಸ್ಐ ಬಸವರಾಜ್ ಜಿ. ಕೆ. ಅವರೇ ತಮ್ಮ ಸಿಬ್ಬಂದಿಯೊಂದಿಗೆ ವಿಶೇಷ ಕಾರ್ಯಾಚರಣೆಗಿಳಿದಿದ್ದಾರೆ.
ದಿನಾಂಕ 14.06.2025 ರಂದು ಶಾಲೆಗಳಿಂದ ಮಕ್ಕಳನ್ನು ಆಟೋಗಳ ಡ್ರೈವರ್ ಸೀಟಿನಲ್ಲಿ ಕೂರಿಸಿಕೊಂಡು ಹೋಗುವುದನ್ನು ಗಮನಿಸಿ
ಶಾಲಾ ಮಕ್ಕಳ ಸುರಕ್ಷತೆಯಿಂದ ಮಕ್ಕಳನ್ನು ಡ್ರೈವರ್ ಸೀಟಿನಿಂದ ಇಳಿಸಿ ಹಿಂಬದಿ ಸೀಟಿನಲ್ಲಿ ಕೂರಿಸಿ ಆಟೋ ಚಾಲಕರಿಗೆ ತಿಳುವಳಿಕೆ ನೀಡಿ ಆಟೋ ಮುಂದೆ ಹಾಗೂ ಹಿಂದೆ ಸಾಮರ್ಥ್ಯಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ನಿಯಮ ಮೀರಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆ ಮೀರಿ ನಿಯಮ ಉಲ್ಲಂಘಿಸುವವರ ವಾಹನ ಸೀಜ್ ಮಾಡುವುದಾಗಿ ವಾರ್ನಿಂಗ್ ಮಾಡಿದ್ದಾರೆ. ಅಲ್ಲದೇ ಈ ವಿಚಾರವಾಗಿ ಸಂಚಾರ ನಿಯಮಗಳನ್ನು ಪಾಲಿಸಲು ಜಾಗೃತಿ ಮೂಡಿಸಿದರು.
ಈ ಬಗ್ಗೆ ಪಿಎಸ್ಐ ಬಸವರಾಜ್ ರವರ ಕಾರ್ಯ ಮೆಚ್ಚಿ ಸಾರ್ವಜನಿಕರು ಹಾಗೂ ಮಕ್ಕಳ ಪೋಷಕರು ಪ್ರಶಂಶಿಸಿರುತ್ತಾರೆ.
ವರದಿ : ಜಿಲಾನಸಾಬ್ ಬಡಿಗೇರ್
