ಬಾಗಲಕೋಟೆ : ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬಾಗಲಕೋಟ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪಟ್ಟಣದಲ್ಲಿ ಇದೇ ಜೂನ್ 14 ರಂದು ಶನಿವಾರ ವಿಶ್ವ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ರಕ್ತದಾನವು ಅತ್ಯಂತ ಪವಿತ್ರ ಮತ್ತು ಮಾನವೀಯ ಸೇವೆಯಾಗಿದೆ. ಒಂದು ಯುನಿಟ್ ರಕ್ತವು ಮೂವರು ಜನರ ಜೀವವನ್ನು ಉಳಿಸಬಲ್ಲದು. ಅಪಘಾತ, ಶಸ್ತ್ರಚಿಕಿತ್ಸೆ, ಖಾಯಿಲೆಗಳು, ಗರ್ಭಿಣಿಯರ ಗಂಭೀರ ಪರಿಸ್ಥಿತಿಗಳು ಮತ್ತು ಅನೇಕ ಚಿಕಿತ್ಸೆಗೆ ರಕ್ತದ ಅಗತ್ಯವಿರುತ್ತದೆ. ಆರೋಗ್ಯವಂತ ವ್ಯಕ್ತಿಯು ವರ್ಷದಲ್ಲಿ ಮೂರು ಅಥವಾ ನಾಲ್ಕು ಬಾರಿ ರಕ್ತದಾನ ಮಾಡಬಹುದಾಗಿದೆ. ಇದು ದಾನಿಗೂ ಯಾವುದೇ ಹಾನಿಯಿಲ್ಲದ ಆರೋಗ್ಯಕರ ಕಾರ್ಯವಾಗಿದೆ ಎಂದು ಅರಿತು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಪಿ ಆಯ್ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಖಾಸಿಂ ಗೊಳಸಂಗಿ, ಮೆಹಬೂಬ ಹಡಗಲಿ, ಸದಾಂ ಮುಲ್ಲಾ, ಅಲ್ತಾಫ್ ಮದರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
- ಕರುನಾಡ ಕಂದ
