ಪರಿಸರ ನಮಗೆ ಬರಿ ಮರ, ಗಿಡಗಳ ತಾಣವಲ್ಲ. ವೃಕ್ಷವೆಂದರೆ ದೇವತೆ ಎನ್ನುವ ಆದರ್ಶ ನಮ್ಮದು – ಮ.ನಿ.ಪ್ರ ಡಾ. ಮಹಾಂತ ಸ್ವಾಮೀಜಿ
ಶಿವಮೊಗ್ಗ/ ಸೊರಬ: ಪರಿಸರ ನಮಗೆ ಬರೀ ಗಿಡಮರಗಳ ತಾಣವಲ್ಲ, ವೃಕ್ಷವೆಂದರೆ ದೇವತೆ ಎಂಬ ಆದರ್ಶ ನಮ್ಮದು. ಪರಿಸರ ಉಳಿದರೆ ಮನುಕುಲ ಉಳಿದೀತು ಎಂದು ಎಂದು ಜಡೆ ಸಂಸ್ಥಾನ ಮಠ-ಸೊರಬ ಮುರುಘಾ ಮಠದ ಡಾ. ಮ.ನಿ.ಪ್ರ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ಕಾಂತಾರಯಜ್ಞ ಕೊಪ್ಪಲು (ಕೆರೆಕೊಪ್ಪ), ಭಾರತೀ ಸಂಪದ ವಡ್ಡಿನಗದ್ದೆ ಸಿದಾಪುರ, ಪರಿಸರ ಜಾಗೃತಿ ಟ್ರಸ್ಟ್, ವಿನಾಯಕ ಮೋಟಾರ್ಸ್ ಕೋಟೇಶ್ವರ, ಕಲಾದ್ವಯ ಟೀ ನರ್ಸರಿ ತಲಕಾಲಕೊಪ್ಪ ಅಕ್ಕನ ಬಳಗ, ಮುರುಘಾ ಮಠದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗಿಡಮರಗಳು ಹಾಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ. ಗಿಡಮರಗಳನ್ನು ಮಕ್ಕಳಂತೆ ಪ್ರೀತಿಸಿ ಬೆಳೆಸಬೇಕು. ಪರಿಸರ ನಮಗೆ ಬರಿ ಮರ, ಗಿಡಗಳ ತಾಣವಲ್ಲ. ವೃಕ್ಷವೆಂದರೆ ದೇವತೆ ಎನ್ನುವ ಆದರ್ಶ ನಮ್ಮದು. ಪ್ರಾಣಿ,ಪಕ್ಷಿ,ಸಸ್ಯ ಜಲ ಸಂಕುಲಗಳಿoದಾಗಿ ಮನುಷ್ಯನಿದ್ದಾನೆ ಅವುಗಳಿಂದ ಹೊರತಾಗಿ ಮನುಷ್ಯನಿರಲು ಸಾಧ್ಯವಿಲ್ಲ. ಅಧುನಿಕ ಸಂಸ್ಕೃತಿಯ ಪ್ರಭಾವದಿಂದಾಗಿ ಪರಿಸರ ವಿನಾಶದ ಅಂಚಿಗೆ ತಲುಪುತ್ತಿದೆ. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಸಂಘ ಸಂಸ್ಥೆಗಳು ಮತ್ತು ಶ್ರೀ ಮಠಗಳಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಆಗಬೇಕು ಎಂದರು.
ನೀಲಗುoದ ಬಸವಲಿಂಗ ಮಹಾ ಸ್ವಾಮೀಜಿ ಮಾತನಾಡಿ ಪ್ರಾಣಿ, ಪಕ್ಷಿಗಳು ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯೆಗಳಿಗಾಗಿ ಪರಿಸರ ಅವಲಂಬಿಸಿದೆ. ಪ್ಲಾಸ್ಟಿಕ್ ಮಾಲಿನ್ಯ ದೂರವಾಗಿಸಿ ಪರಿಸರವನ್ನು ರಕ್ಷಿಸಬೇಕು. ಮಕ್ಕಳಲ್ಲಿ ಪರಿಸರದ ಬಗ್ಗೆ ಪರಿಜ್ಞಾನ ಮೂಡಿಸಬೇಕಿದೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಮುಂದಾಗಬೇಕು ಎಂದರು.
ವೃಕ್ಷ ಪೂಜೆ ನಡೆಸಿ ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ಉಳಿವು ಫೌಂಡೇಶನ್ ಸೆಂಟರ್ ಫಾರ್ ಸಿಂಬಿಯೋಸಿನ್, ಸಂಸ್ದಾಪಕಿ ಡಾ. ಸೀಮಾ ಎಸ್.ಅರ್ ಮಾತನಾಡಿ ಕೊಳ್ಳು ಬಾಕ ಸಂಸ್ಕೃತಿಯಿoದ ಪರಿಸರ ದಿನನಿತ್ಯವೂ ಹಾಳಾಗುತ್ತಿದೆ ಹಳೇ ವಸ್ತುಗಳನ್ನು ಕೊಟ್ಟು ಹೊಸ ವಸ್ತುಗಳನ್ನು ಕೊಳ್ಳಿ ಎಂದು ಆಮಿಷ ತೋರಿಸಿ ಹೊಸ ಹೊಸ ವಸ್ತುಗಳನ್ನು ಕೈಗಾರಿಕೋದ್ಯಮಿಗಳು ಉತ್ಪಾದನೆಗೆ ಮುಂದಾಗಿದ್ದರಿoದ ಉತ್ಪಾದನೆ ಹೆಚ್ಚಳಕ್ಕಾಗಿ ಪರಿಸರ ನಾಶ ಮಾಡಲಾಗುತ್ತಿದೆ. ತಾವು ಸ್ವತಃ ಪ್ರತಿ ನಿತ್ಯ ಬಳಸುವ ವಸ್ತುಗಳು ಪದೇ ಪದೇ ಬದಲಾಯಿಸುವುದಾಗಿರುವುದಿಲ್ಲ ಉಪಯೋಗಿಸಿ ಎಸೆಯುವ ಅನುಪಯುಕ್ತ ಎಲ್ಲಾ ವಸ್ತುಗಳು ನದಿಯನ್ನು, ಗಾಳಿಯನ್ನು ಸೇರಿ ಪರಿಸರ ನಾಶವಾಗುತ್ತದೆ ಪ್ರಪಂಚ ಮನುಷ್ಯನಿಲ್ಲದೆ ಇರಬಹುದು ಆದರೆ ಜೀವ ಸಂಕುಲಗಳಿಲ್ಲದೆ ಇರಲು ಸಾಧ್ಯವಿಲ್ಲ ಎಂದರು.
ಸಾಗರ ಸೈನ್ಸ್ ಪೋರಂ ಅಧ್ಯಕ್ಷ ಡಾ. ಹೆಚ್. ಎಸ್. ಜೀವನ್ ಮಾತನಾಡಿ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿರುವ ಪರಿಣಾಮ ಸಮಸ್ಯೆಗಳು ಉಂಟಾಗುತ್ತಿವೆ ಎಲ್ಲರೂ ಸರಳತೆಯಿಂದ ಬದುಕುವುದರಿಂದ ಪರಿಸರ ನಾಶವನ್ನು ತಡೆಯಬಹುದು ಎಂದರು.
ದoತ ವೈದ್ಯ ಡಾ|| ಜ್ಞಾನೇಶ್ ಹೆಚ್ ಈ ಮಾತನಾಡಿ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸುವ ನಾವುಗಳು ನೆಟ್ಟ ಗಿಡವನ್ನು ಬೆಳೆಸಲು ಮುಂದಾಗಬೇಕು. ಪರಿಸರ ನಾಶಕ್ಕೆ ಮಾನವನೇ ಮೂಲ ಕಾರಣನಾಗಿದ್ದಾನೆ ಮನುಷ್ಯ ಮಾಡುವ ಯಾವ ಕಾರ್ಯಗಳು ಪ್ರಕೃತಿಗೆ ಪೂರಕವಾಗಿರದೆ ಮಾರಕವಾಗಿವೆ ಎಂದರು.
ಶಿರಾಳಕೊಪ್ಪ ಕದಂಬ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ವಸುಮತಿ ಮಾತನಾಡಿ ನಾವು ಆಧುನಿಕತೆ ಮತ್ತು ಪ್ರಾಚೀನತೆಯ ನಡುವೆ ಬದುಕುತ್ತಿದ್ದೇವೆ ಪರಿಸರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡುವ ಕೊಡುಗೆಯಾಗಿದೆ ಎಂದರು.
ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ, ಹಿರಿಯ ವಕೀಲ ಎಂ.ಆರ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಪಂಚ ವೇಗವಾಗಿ ಬೆಳೆಯುತ್ತಿದ್ದಷ್ಟೆ ಪರಿಸರ ಕ್ಷೀಣಿಸುತ್ತಿರುವುದು ವಿಷಾದಕರ. ಪರಿಸರ ಸಂರಕ್ಷಣೆಗೆ ಸಂವಿಧಾನದ ಪರಿಛ್ಛೇದದಲ್ಲಿ ಒತ್ತು ನೀಡಲಾಗಿದ್ದರೂ ಸಹ ಸಂರಕ್ಷಣೆ ಕಷ್ಟ ದಯಕವಾಗಿದೆ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿಯನ್ನು ಸೃಷ್ಟಿ ಪರಿಸರ ಕಾಪಾಡಬೇಕಾಗಿದೆ ಎಂದರು.
ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಿರಿಗೌರಿ ಧೂಪದಮಠ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶ್ರೀಮ. ನಿ. ಪ್ರ ಬಸವಲಿಂಗ ಮಹಾ ಸ್ವಾಮೀಜಿ ನವಲಗುಂದ, ಕಾಂತರಯಜ್ಞದ ಸಂಚಾಲಕ ಮಂಜುನಾಥ್ ಹೆಗಡೆ, ನಿವೃತ್ತ ಪ್ರಾಂಶುಪಾಲ ಪ್ರೊ.ಹೆಚ್.ಬಿ.ಪಂಚಾಕ್ಷರಯ್ಯ, ಉಪ ವಲಯ ಅರಣ್ಯಾಧಿಕಾರಿ ಭದ್ರೇಶ್, ಡಾ. ಹೆಚ್.ಎಸ್.ಜೀವನ್, ಡಾ| ಜಾಹ್ನವಿ, ಪ್ರಶಾಂತ್ ದೊಡ್ಡಮನೆ, ಉಪನ್ಯಾಸಕಿ ವಸುಮತಿ, ಪ್ರಿಯದರ್ಶಿನಿ, ಮಠದ ಕಾರ್ಯದರ್ಶಿ ಡಿ.ಶಿವಯೋಗಿ, ವಕೀಲ ಎಂ.ನಾಗಪ್ಪ, ನಾಗರಾಜ ಗೌಡ ಮತ್ತಿತತರಿದ್ದರು.
ವೀಣಾ ಸಂಗಡಿಗರು ಪ್ರಾರ್ಥಿಸಿದರು. ಜೇನು ಕೃಷಿಕ ಉಪನ್ಯಾಸಕ ವಿಘ್ನೇಶ್ ತಲಕಾಲಕೊಪ್ಪ ಸ್ವಾಗತಿಸಿದರು, ನಿವೃತ್ತ ಶಿಕ್ಷಕ ಅಶೋಕ ಕಾರ್ಯಕ್ರಮ ನಿರೂಪಿಸಿದರು.
“ಪ್ರಾಣಿ, ಪಕ್ಷಿ, ಸಸ್ಯ ಜಲ ಸಂಕುಲಗಳಿoದಾಗಿ ಮನುಷ್ಯನಿದ್ದಾನೆ ಅವುಗಳಿಂದ ಹೊರತಾಗಿ ಮನುಷ್ಯನಿರಲು ಸಾಧ್ಯವಿಲ್ಲ. ಅಧುನಿಕ ಸಂಸ್ಕೃತಿಯ ಪ್ರಭಾವದಿಂದಾಗಿ ಪರಿಸರ ವಿನಾಶದ ಅಂಚಿಗೆ ತಲುಪುತ್ತಿದೆ.
- ಮ.ನಿ.ಪ್ರ ಡಾ. ಮಹಾಂತ ಮಹಾಸ್ವಾಮೀಜಿ, ಜಡೆ ಸಂಸ್ಥಾನ ಮಠ
“ಪ್ಲಾಸ್ಟಿಕ್ ಮಾಲಿನ್ಯ ದೂರವಾಗಿಸಿ ಪರಿಸರವನ್ನು ರಕ್ಷಿಸಬೇಕು. ಮಕ್ಕಳಲ್ಲಿ ಪರಿಸರದ ಬಗ್ಗೆ ಪರಿಜ್ಞಾನ ಮೂಡಿಸಬೇಕಿದೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಮುಂದಾಗಬೇಕು.
- ಶ್ರೀ ಬಸವಲಿಂಗ ಮಹಾ ಸ್ವಾಮೀಜಿ, ನೀಲಗುಂದ
“ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸುವ ನಾವುಗಳು ನೆಟ್ಟ ಗಿಡವನ್ನು ಬೆಳೆಸಲು ಮುಂದಾಗಬೇಕು. ಪರಿಸರ ನಾಶಕ್ಕೆ ಮಾನವನೇ ಮೂಲ ಕಾರಣನಾಗಿದ್ದಾನೆ.
- ಡಾ!! ಜ್ಞಾನೇಶ್ ಹೆಚ್ .ಈ, ದಂತವೈದ್ಯ.
- ಕರುನಾಡ ಕಂದ
