ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

19ನೇ ಕ್ರಸ್ಟ್‌ಗೇಟ್‌ ಅಳವಡಿಕೆಗೆ ನಡೆದಿದೆ ಭರದ ಸಿದ್ಧತೆ

ವಿಜಯನಗರ / ಹೊಸಪೇಟೆ : ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಹೊರತುಪಡಿಸಿ, ಉಳಿದ 32 ಕ್ರಸ್ಟ್‌ಗೇಟ್‌ಗಳನ್ನು ಬದಲಿಸುವ ಪ್ರಕ್ರಿಯೆ ಮುಂದಿನ ಬೇಸಿಗೆ ವೇಳೆ ಆರಂಭಿಸುವ ಸಾಧ್ಯತೆಯಿದ್ದು, ಈ ಕ್ರಸ್ಟ್‌ಗೇಟ್‌ಗಳನ್ನು ಜಲಾಶಯದ ಸಮೀಪದಲ್ಲಿಯೇ ನಿರ್ಮಿಸುವ ಚಿಂತನೆ ನಡೆದಿದೆ.

ಸದ್ಯ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ನಿರ್ಮಾಣ ಭರದಿಂದ ನಡೆಯುತ್ತಿದ್ದು, ಇದೇ ತಿಂಗಳು ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ. ಉಳಿದ 32 ಗೇಟ್‌ಗಳ ಕಾಮಗಾರಿಯನ್ನು ಜಲಾಶಯದ ಸಮೀಪದಲ್ಲಿಯೇ ನಡೆಸಿದರೆ ಸಾಗಣೆ ಸಮಸ್ಯೆ ತಪ್ಪಲಿದೆ. ದೂರದ ಕೈಗಾರಿಕೆಗಳಲ್ಲಿ ನಿರ್ಮಾಣ ಮಾಡಿದಲ್ಲಿ ಸಾಗಣೆಗೆ ತೊಂದರೆಯಾಗಲಿರುವ ಹಿನ್ನೆಲೆ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಕ್ರಸ್ಟ್‌ಗೇಟ್‌ಗಳು ಅಶಕ್ತಗೊಂಡಿರುವ ಕುರಿತ ತಜ್ಞರ ವರದಿ ಆಧರಿಸಿ, ಬದಲಾವಣೆಗೆ ತುಂಗಭದ್ರಾ ಮಂಡಳಿ ಮುಂದಾಗಿದೆ. ಹೊಸ ಗೇಟ್‌ಗಳನ್ನು ಅಳವಡಿಸುವ ಗುತ್ತಿಗೆ ಗುಜರಾತ್‌ ಮೂಲದ ಹಾರ್ಡವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್ ಕಂಪನಿ ಪಡೆದಿದೆ. 15 ತಿಂಗಳಲ್ಲಿ ಕಾಮಗಾರಿ ಪೂರೈಸಬೇಕೆಂಬ ಕಾಲಮಿತಿ ನೀಡಲಾಗಿದೆ.
19ನೇ ಕ್ರಸ್ಟ್‌ಗೇಟ್‌ ನಿರ್ಮಾಣದ ಹೊಣೆಯೂ ಇದೇ ಕಂಪನಿಗೆ ನೀಡಲಾಗಿದೆ.

ತಿಂಗಳಾಂತ್ಯಕ್ಕೆ ಅಳವಡಿಕೆ:
ಜಲಾಶಯದ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ಇದೇ ವರ್ಷ ಬದಲಿಸಿ ನೂತನ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ಬಗ್ಗೆ ಈ ಹಿಂದೆಯೇ ತಜ್ಞರ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ನಿಟ್ಟಿನಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಚರ್ಚೆಗಳು ನಡೆಯುತ್ತಿದ್ದವು. ಎಲ್ಲ ಕ್ರಸ್ಟ್‌ಗೇಟ್‌ಗಳು ಅಶಕ್ತಗೊಂಡಿರುವ ಕುರಿತ ತಜ್ಞರ ವರದಿ ಆಧರಿಸಿ, ಬದಲಾವಣೆಗೆ ತುಂಗಭದ್ರಾ ಮಂಡಳಿ ಮುಂದಾಗಿದೆ. ಹೊಸ ಗೇಟ್‌ಗಳನ್ನು ಅಳವಡಿಸುವ ಗುತ್ತಿಗೆ ಗುಜರಾತ್‌ ಮೂಲದ ಹಾರ್ಡವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್ ಕಂಪನಿ ಪಡೆದಿದೆ. 15 ತಿಂಗಳಲ್ಲಿ ಕಾಮಗಾರಿ ಪೂರೈಸಬೇಕೆಂಬ ಕಾಲಮಿತಿ ನೀಡಲಾಗಿದೆ. 19ನೇ ಕ್ರಸ್ಟ್‌ಗೇಟ್‌ ನಿರ್ಮಾಣದ ಹೊಣೆಯೂ ಇದೇ ಕಂಪನಿಗೆ ನೀಡಲಾಗಿದೆ.

80 ಟಿಎಂಸಿ ಮಾತ್ರ ಸಂಗ್ರಹ:
ತುಂಗಭದ್ರಾ ಜಲಾಶಯಕ್ಕೆ ಈ ಜಲ ವರ್ಷದಲ್ಲಿಎಷ್ಟೇ ಪ್ರಮಾಣದಲ್ಲಿ ನೀರು ಹರಿದು ಬಂದರೂ ತಜ್ಞರ ಎಚ್ಚರಿಕೆ ಆಧರಿಸಿ, ಈ ಬಾರಿ ಜಲಾಶಯದ ಗರಿಷ್ಠ 105 ಟಿಎಂಸಿ ಬದಲು 80 ಟಿಎಂಸಿ ನೀರು ಸಂಗ್ರಹಿಸಲು ನಿರ್ಧರಿಸಲಾಗಿದೆ. ಎಲ್ಲಾ ಕ್ರಸ್ಟ್‌ಗೇಟ್‌ಗಳು ಅಶಕ್ತವಾದ ಹಿನ್ನೆಲೆ ಜಲಾಶಯದ ಭದ್ರತೆ ದೃಷ್ಟಿಯಿಂದ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸುವುದು ಸೂಕ್ತ. ತಜ್ಞರ ಸಲಹೆಯಂತೆ ಪ್ರಸಕ್ತ ವರ್ಷ ಬೆಳೆಗಳಿಗೆ 80 ಟಿಎಂಸಿ, ಕುಡಿಯುವ ಉದ್ದೇಶ, ಕಾರ್ಖಾನೆಗಳ ಬಳಕೆ, ಜಲಚರಗಳ ಉಳಿವಿಗೆ 40 ಟಿಎಂಸಿ ಸೇರಿ ಈ ಬಾರಿ ಒಟ್ಟು 120 ಟಿಎಂಸಿ ನೀರು ಮಾತ್ರ ಬಳಸಿಕೊಳ್ಳಬಹುದು ಎಂದು ನಿರ್ಧಾರಕ್ಕೆ ಬರಲಾಗಿದೆ.

ಗರಿಷ್ಠ 80 ಟಿಎಂಸಿ ನೀರು ಸಂಗ್ರಹಿಸಿದ ನಂತರ ಹೆಚ್ಚುವರಿ ನೀರನ್ನು ನದಿಗೆ ಹರಿಸಬೇಕಾದ ಅನಿವಾರ್ಯತೆಯಿದೆ. ಎಲ್ಲ33 ಕ್ರಸ್ಟ್‌ಗೇಟ್‌ಗಳನ್ನು ಬದಲಿಸಿದ ಬಳಿಕವಷ್ಟೇ 105 ಟಿಎಂಸಿ ನೀರು ಸಂಗ್ರಹಿಸುವ ಸಾಧ್ಯತೆಯಿದೆ.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಅಳವಡಿಕೆಗೆ ಸಿದ್ಧತೆಗಳು ಭರದಿಂದ ನಡೆದಿವೆ. ಉಳಿದ 32 ಕ್ರಸ್ಟ್‌ಗೇಟ್‌ಗಳ ನಿರ್ಮಾಣವನ್ನೂ ಅದೇ ಕಂಪನಿಗೆ ಗುತ್ತಿಗೆ ಪಡೆದಿದೆ. ಮುಂದಿನ ವರ್ಷ ಎಲ್ಲಾ ಕ್ರಸ್ಟ್‌ಗೇಟ್‌ಗಳು ಬದಲಾಗಲಿವೆ. ಗುತ್ತಿಗೆ ಕಂಪನಿಗೆ 15 ತಿಂಗಳ ಕಾಲಾವಧಿ ನಿಗದಿಪಡಿಸಲಾಗಿದೆ ಎಂದಿದ್ದಾರೆ ನಾರಾಯಣನಾಯ್ಕ ಸೂಪರಿಂಟೆಂಡೆಂಟ್‌ ಎಂಜಿನಿಯರ್‌, ತುಂಗಭದ್ರಾ ಮಂಡಳಿ ಮುನಿರಾಬಾದ್‌.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ