ಯಾದಗಿರಿ: ಆರೋಗ್ಯ ಆವಿಷ್ಕಾರ ಯೋಜನೆಯ ಚಾಲನೆಗೆ ಯಾದಗಿರಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಜಯ ಕರ್ನಾಟಕ ಸಂಘಟನೆಯ ಯಾದಗಿರಿ ವತಿಯಿಂದ ಗುರುಮಠಕಲ್ ತಾಲೂಕು ಗಡಿ ಭಾಗದ ಸಮಸ್ಯಗಳ ಕುರಿತಾಗಿ ಈ ಕೆಳಕಂಡ ಅಂಶಗಳ ಕುರಿತಾಗಿ ಮನವಿ ನೀಡಿದರು.
- ಈ ಭಾಗದ ರೈತರಿಗೆ ಕೃಷಿ ಸಾಮಗ್ರಿಗಳು ಡಿಎಪಿ, ಸ್ಟಿಕ್, ಮಂಗಳ ಅಂತಹ ರಸಗೊಬ್ಬರಗಳು ರಾಜ್ಯ ಸರಕಾರದಿಂದ ಸಮರ್ಪಕವಾಗಿ ಸಿಗದೇ ಹೊರ ರಾಜ್ಯದಲ್ಲಿ ಖರೀದಿಸಲು ಹೋಗುತ್ತಿರುವ ಕುರಿತಾಗಿ, ಬಿತ್ತಲು ರೈತರಿಗೆ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಸಲು ತುರ್ತು ಕ್ರಮ ಕೈಗೊಳ್ಳಬೇಕು.
- ಗುರುಮಠಕಲ್ ತಾಲೂಕಿನ ಜನತೆಗೆ ಮೂಲಭೂತ ಸೌಲಭ್ಯಗಳಾದ ಆರೋಗ್ಯ, ಶಿಕ್ಷಣ, ನೀರು, ರಸ್ತೆ, ಚರಂಡಿಗಳು, ಶಾಲಾ ಕಟ್ಟಡಗಳು, ಸರಕಾರದ ಸೇವೆಗಳು ಇಲ್ಲಿನ ಜನತೆಗೆ ಸಿಗದೆ ವಂಚಿತರಾಗಿದ್ದು ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿ ಮಾಡುವ ಮೂಲಕ ಗಡಿಭಾಗವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
- ಗುರುಮಠಕಲ್ ಪಟ್ಟಣದಲ್ಲಿ 23 ವಾರ್ಡ್ ಗಳಿದ್ದು ಇಲ್ಲಿ ಪ್ರತಿಯೊಂದು ವಾರ್ಡ್ ಗೂ ಆಶಾ ಕಾರ್ಯಕರ್ತೆಯರನ್ನು ನೇಮಿಸಲು ತಾವುಗಳು ಸಂಬಂಧಪಟ್ಟ ಇಲಾಖೆಯವರಿಗೆ ಸೂಚನೆ ನೀಡಬೇಕು.
- ಸರಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ, ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಹಾಗೂ ಈ ಆರೋಗ್ಯ ಕೇಂದ್ರದಲ್ಲಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ತಜ್ಞರು, ಅರವಳಿಕೆ ತಜ್ಞರು ಇರದೆ ಇರುವುದರಿಂದ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಿಲ್ಲಿಸಿದ್ದಾರೆ ಇದರಿಂದ ತಾಲುಕಿನ ಜನರಿಗೆ ಸಮಸ್ಯೆ ಉಂಟಾಗಿದ್ದು ಕಾರಣ ತಾವುಗಳು ಪುನಃ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಪುನಃ ಪ್ರಾರಂಭಿಸಬೇಕು.
- ಆಸ್ಪತ್ರೆಯಲ್ಲಿ ಕ್ಷ-ಕಿರಣ ತಂತ್ರಜ್ಞರು ಇಲ್ಲದೆ ಇರುವುದರಿಂದ ಈ ಉಪಕರಣ ತುಕ್ಕು ಹಿಡಿಯುತ್ತಿದ್ದು ಕೂಡಲೇ ನೇಮಕ ಮಾಡಬೇಕು.
- ತಾಲೂಕಿನ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕೆಂದು ಮನವಿಯನ್ನು ಜಿಲ್ಲಾಧ್ಯಕ್ಷರಾದ ಬಿ. ಎನ್. ವಿಶ್ವನಾಥ ನಾಯಕ ರವರ ನೇತೃತ್ವದಲ್ಲಿ ನೀಡಲಾಗಿದೆ ಎಂದು ನಾಗೇಶ್ ಗದ್ದಗಿ ಗುರುಮಠಕಲ್ ತಾಲೂಕ ಅಧ್ಯಕ್ಷರು ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಕುಮಾರ್ ಮೊಗದಮಪುರ ರಾಜ್ಯ ಕಾರ್ಯದರ್ಶಿಗಳು, ಶಿವರಾಜ್ ಗುತ್ತೇದಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗೋಪಾಲಕೃಷ್ಣ ಮೇದಾ ಪ್ರಧಾನ ತಾಲೂಕ ಕಾರ್ಯದರ್ಶಿ, ಕಾಶಪ್ಪ ದೊರೆ ಉಪಾಧ್ಯಕ್ಷರು, ಜಿಲ್ಲಾ ಮತ್ತು ತಾಲೂಕಿನ ಕೆಲವು ಪದಾಧಿಕಾರಿಗಳು ಹಾಜರಿದ್ದರು.
ವರದಿ ಜಗದೀಶ್ ಕುಮಾರ ಭೂಮಾ
