ಕಲ್ಬುರ್ಗಿ : ಕರ್ನಾಟಕ ನಾಟಕ ಬರಹಗಾರರ (ಕವಿಗಳ) ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಶಂಕರಜಿ ಹೂವಿನ ಹಿಪ್ಪರಗಿ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು ಉತ್ತರ ಕರ್ನಾಟಕದ ಹೆಮ್ಮೆಯ ನಾಟಕಕಾರ, ಕವಿ, ಕಲಾವಿದ, ಸಂಘಟನಾ ಚತುರ, ಹಳ್ಳಿಯಲ್ಲಿ ಎಲೆಮರಿ ಕಾಯಿಯಂತಿರುವ ಸಾವಿರಾರು ಹವ್ಯಾಸಿ ಕಲಾವಿದರನ್ನು ಗುರುತಿಸಿ ಅವರಿಗೆ ಮುಖ್ಯವಾಹಿನಿಗೆ ತಂದು ಅವಕಾಶ ನೀಡಿ ತಾಲ್ಲೂಕು, ಜಿಲ್ಲೆ ರಾಜ್ಯ ಮಟ್ಟದಲ್ಲಿ ಅವಕಾಶ ನೀಡಿ ಹಲವಾರು ಕವಿ ಕಲಾವಿದರಿಗೆ ಪ್ರತೀ ವರ್ಷ ಪ್ರತಿಭೆಗೊಂದು ರಂಗ ವೇದಿಕೆ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿ ರಂಗಸಿರಿ, ರಂಗಸುವಣ೯ ಎಂಬ ಪ್ರಶಸ್ತಿ ಜೊತಗೆ ತಲಾ ೫(ಐದು) ಗ್ರಾಂ. ಚಿನ್ನ ನೀಡಿ ಗೌರವಿಸಿ ರಂಗಭೂಮಿ ಕಲೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ತಲ್ಲೀನರಾದ ಒಬ್ಬ ನಿಷ್ಠಾವಂತ ನಿಷ್ಕಲ್ಮಶ ಕವಿಗಳಿಗೆ ಸವಾ೯ನುಮತದಿಂದ ಆಯ್ಕೆ ಮಾಡಿದ ಕರ್ನಾಟಕ ರಾಜ್ಯದ ಎಲ್ಲಾ ಕವಿವರ್ಯರಿಗೂ ಹೃದಯಪೂವ೯ಕ ವಂದನೆಗಳು.
ಆಯ್ಕೆ ಮಾಡಿದ ಎಲ್ಲಾ ಕವಿಗಳ ಆಶಯದಂತೆ ಶ್ರೀ ಶಂಕರಜಿಯವರು ಹಗಲಿರಳು ಶ್ರಮಿಸಿ ಕರ್ನಾಟಕ ರಾಜ್ಯಾದ್ಯಂತ ಇನ್ನು ಮುಖ್ಯವಾಹಿನಿಗೆ ಬರದೆ ಇರುವ ಹಲವಾರು ಕವಿಗಳನ್ನು ಗುರುತಿಸುವುದರೊಂದಿಗೆ ಸಂಘದ ಇನ್ನುಳಿದ ಸದಸ್ಯರ ಸಹಕಾರದೊಂದಿಗೆ ರಾಜ್ಯಾದ್ಯಂತ ಕವಿಗಳ ನೋವು ನಲಿವುಗಳಿಗೆ ದೂರು ದುಮ್ಮಾನಗಳಿಗೆ ಪರಿಹಾರ ದೊರಕಿಸುವ ಕಾರ್ಯಕ್ಕೆ ಮುಂದಾಗಲಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕವಿವೃಂದಕ್ಕೆ ಸವ೯ ಸದಸ್ಯರ ಸಹಕಾರದೊಂದಿಗೆ ಸಂಕಟಹರನಾಗಿ ಸವ೯ರಿಗೂ ಸಮಪಾಲು ಸವ೯ರಿಗೂ ಸಮಬಾಳು ಎನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸಕಲ ಕವಿಗಳ ಕಷ್ಟ ನಷ್ಟಗಳಿಗೆ ಸ್ಪಂದಿಸಿ ಸಮಾನವಾಗಿ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಮಹತ್ತರವಾದ ಜವಾಬ್ಧಾರಿಯನ್ನು ನಮ್ಮಕಲ್ಬುರ್ಗಿ ಜಿಲ್ಲೆ ಚಿಂಚೋಳಿಯ ತಾಲೂಕಿನ ಹೆಮ್ಮೆಯ ಮಗ ಶ್ರೀ ಶಂಕರಜಿ ಕವಿಗಳಿಗೆ ನೀಡಿದಕ್ಕೆ ಮತ್ತೊಮ್ಮೆ ತಮ್ಮೆಲ್ಲರಿಗೂ(ಕವಿಗಳಿಗೆ) ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿ
ತಾಲೂಕಿನ ಕಲಾವಿದರು ಮತ್ತು ನಾಟ್ಯ ಸಂಘದ ಮಾಲೀಕರಗಳಾದ ವೀರಣ್ಣ ಗಂಗಾಣಿ, ಶಿವರಾಜ್ ಪಾಟೀಲ್ ಗೋಣಿಗಿ, ರಾಜಶೇಖರ್ ಗುಡದಾ, ಜಗದೀಶ ಪಾಟೀಲ್, ಪ್ರಶಾಂತ ಕೊಡ್ದೂರ, ಕಾಳು ಕೆರೆಮನೋರ, ಬಾಬು ಗೋಪಾನ, ಶಿವು ಸುಲೇಪೇಟ, ಶರಣು ಸಾಲಿಮಠ, ಗುಂಡಪ್ಪ ಮಾಳಗಿ, ಸಂತೋಷ್ ಖನ್ನ್ ಇವರುಗಳು ಶುಭ ಕೋರಿದ್ದಾರೆ.
ವರದಿ ಚಂದ್ರಶೇಖರ್ ಆರ್ ಪಾಟೀಲ್
