ಆಡುತ ಕುಣಿದೆವು ರಜೆಯಲ್ಲಿ
ಬೆರೆತು ನಲಿದೆವು ಗೆಳೆಯರಲ್ಲಿ
ಈಜು ಕಲಿತೆವು ಊರ ಕೆರೆಯಲ್ಲಿ
ಸೌಂದರ್ಯ ಸವಿದೆವು ಹಳ್ಳಿಯಲ್ಲಿ.
ಗಂಡು ಹೆಣ್ಣೆಂಬ ಭೇದವಿಲ್ಲದೆ
ಮೇಲು ಕೀಳೆಂಬ ಅರಿವಿಲ್ಲದೆ
ಹಸಿವು ನೀರಡಿಕೆಯ ಕಾಣದೆ
ಸಂತಸ ಪಟ್ಟೆವು ಚಿಂತೆಯಿಲ್ಲದೆ.
ಮುಗಿದು ಹೋದವು ರಜೆಗಳು
ಮತ್ತೊಮ್ಮೆ ತೆರೆದವು ಶಾಲೆಗಳು
ನಮ್ಮ ಶಾಲೆಯತ್ತ ನಾವುಗಳು
ಪ್ರಾರಂಭಕ್ಕೆ ಸಿದ್ಧವು ಪಾಠಗಳು.
ಆವರಣ ಸ್ವಚ್ಛತೆಯ ಮಾಡೋಣ
ಹೊಸ ಹೊಸ ಸಸಿಗಳ ನೆಡೋಣ
ಪ್ರಕೃತಿಯ ಬೆಳೆಸಿ ಪೋಷಿಸೋಣ
ಸೃಷ್ಟಿ ತ್ಯಾಗಕ್ಕೆ ನಿತ್ಯ ನಮಿಸೋಣ.
ಕಲಿತು ವರ್ಣಮಾಲೆಯ ಅಕ್ಷರ
ಪಡೆಯುವೆವು ಜ್ಞಾನ ಭಂಡಾರ
ಹೆಚ್ಚಲದು ಶ್ರದ್ಧೆಯೆಂಬ ಆಗರ
ನಮ್ಮಯ ಬದುಕೆಲ್ಲ ಸುಂದರ.
ಹೇಳಿ ಕೊಟ್ಟ ವಿದ್ಯೆ ಕಲಿಯೋಣ
ಗುರುಗಳ ಮಾತನ್ನು ಕೇಳೋಣ
ಉತ್ತಮ ಪ್ರಜೆಗಳು ಎನಿಸೋಣ
ಸಮಾಜಕ್ಕೆ ಮಾದರಿ ಆಗೋಣ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.
