ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅತ್ತಿವೇರಿಯಲ್ಲಿ ಮತ್ತೆ ಶ್ರೀಗಂಧ ಮರ ಕಳ್ಳತನ: ಲೂಟಿಯಾಗುತ್ತಿದೆ ವನ್ಯ ಸಂಪತ್ತು

ಉತ್ತರ ಕನ್ನಡ/ ಮುಂಡಗೋಡ: ಕಳೆದ ಒಂದು ವಾರದ ಹಿಂದೆ ಅತ್ತಿವೇರಿ ಗ್ರಾಮದ ಗಡಿ ಭಾಗದಲ್ಲಿ ಶ್ರೀಗಂಧ ಮರವನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದು ಇನ್ನೊಂದು ಮರಕ್ಕೆ ವಿಫಲ ಯತ್ನ ನಡೆಸಿ, ಅದನ್ನು ಸಾಗಿಸಲಾಗದೆ ಅಲ್ಲೇ ಬಿಟ್ಟು ತೆರಳಿದ್ದರು, ಈ ಬಗ್ಗೆ ಮುಂಡಗೋಡ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು, ಅಧಿಕಾರಿಗಳು ಕೂಡ ಆರೋಪಿಗಳನ್ನು ಸೆರೆಹಿಡಿಯುವ ಕುರಿತು ಹೇಳಿಕೆ ನೀಡಿದ್ದರು. ಈಗ ಮತ್ತೆ ಅತ್ತಿವೇರಿ ಅರಣ್ಯ ವ್ಯಾಪ್ತಿಯಲ್ಲಿ ಮತ್ತೊಂದು ಶ್ರೀಗಂಧ ಮರ ಕಳ್ಳತನವಾಗಿದ್ದು ಸಿಬ್ಬಂದಿಗಳ ಬೇಜವಾಬ್ದಾರಿತನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮುಂಡಗೋಡ ತಾಲೂಕಿನ ವನ್ಯ ಸಂಪತ್ತು ಕಳ್ಳ ಕಾಕರ ಪಾಲಾಗುತ್ತಿದೆ. ಮುಂಡಗೋಡ ಅರಣ್ಯ ವಲಯ ವ್ಯಾಪ್ತಿಯ ಅತ್ತಿವೇರಿ ಪಕ್ಷಿಧಾಮದ ಹತ್ತಿರ ಇರುವ ಅತ್ತಿಗೇರಿ ಗ್ರಾಮದ ಗಡಿಯಂಚಲ್ಲಿ ಘಟನೆ ನಡೆದಿದ್ದು, ಶ್ರೀಗಂಧ ಮರವನ್ನ ಕತ್ತರಿಸಿ ತುಂಡುಗಳನ್ನಾಗಿ ಮಾಡಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಕೃತ್ಯ ನಡೆದು ಎರಡು ದಿನಗಳಾದರೂ ಅಧಿಕಾರಿಗಳಿಂದ ಯಾವುದೇ ರೀತಿಯಾಗಿ ಆರೋಪಿಗಳ ಪತ್ತೆ ಕಾರ್ಯ ಪ್ರಾರಂಭವಾಗಿಲ್ಲ ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ಒಂದು ಶ್ರೀಗಂಧ ಮರವನ್ನ ಕಳ್ಳರು ಕಳೆದುಕೊಂಡು ಹೋಗಿದ್ದು ಆರೋಪಿಗಳ ಪತ್ತೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಫಾರೆಸ್ಟ್ರ್ ಮತ್ತು ಗಾರ್ಡ್ ನಿರ್ಲಕ್ಷ್ಯ

ಸದರಿ ಆತ್ತಿವೆರಿ ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫಾರೆಸ್ಟರ್ ಮತ್ತು ಗಾರ್ಡ್ ನಿರ್ಲಕ್ಷ್ಯ ಹಾಗೂ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿಗೆ ಸತತ 15 ದಿನಗಳಲ್ಲಿ ಎರಡನೇ ಬಾರಿ ಪ್ರಕರಣ ನಡೆದಿದ್ದು ಕಳೆದ ಬಾರಿ ಪ್ರಕರಣವಾದಾಗಲೇ “ಕರುನಾಡ ಕಂದ” ಈ ಬಗ್ಗೆ ಎಚ್ಚರಿಸಿತ್ತು ಅರಣ್ಯ ವ್ಯಾಪ್ತಿಯಲ್ಲಿ ಸಾಕಷ್ಟು ಗಂಧದ ಮರಗಳ ಸಂಖ್ಯೆ ಇದ್ದು ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿತ್ತು ಆದರೆ ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೋಟೆಯಲ್ಲಿ ಲೂಟಿ ಮಾಡಿದ ಮೇಲೆ ಬಾಗಿಲು ಹಾಕಿದರಂತೆ ಎಂಬ ರೀತಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು ಇವರನ್ನು ನಿಯಂತ್ರಿಸುವ ಹಿರಿಯ ಅಧಿಕಾರಿಗಳು ಕೂಡಾ ಅಸಹಾಯಕರಾದರೆ ಎಂಬ ಅನುಮಾನ ಮೂಡುತ್ತಿದೆ.

ಪ್ರಕರಣ ಮುಚ್ಚಿ ಹಾಕಲು ಯತ್ನ:

ಯಾವಾಗ ಸತತ ಎರಡನೇ ಬಾರಿಗೆ ಶ್ರೀಗಂಧ ಮರ ಕಳ್ಳತನ ಪ್ರಕರಣ ನಡೆಯಿತು ಆದಷ್ಟು ಅದನ್ನ ಮುಚ್ಚಿ ಹಾಕಲು ಯತ್ನ ನಡೆಯಿತಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಕಾರಣ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳಿಂದ ಯಾವುದೇ ಸೂಕ್ತ ಮಾಹಿತಿ ಸಿಕ್ಕಿರಲಿಲ್ಲ ಈ ಬಗ್ಗೆ “ಕರುನಾಡ ಕಂದ” ಸ್ಥಳ ಪರಿಶೀಲನೆ ಮಾಡಿದಾಗ ಸ್ಥಳದಲ್ಲಿ ಶ್ರೀಗಂಧದ ಮರವನ್ನು ತುಂಡುಗಳನ್ನಾಗಿ ಮಾಡಿಕೊಂಡು ಕಟಾವು ಮಾಡಿರುವುದು ಅರಣ್ಯದಲ್ಲಿ ಪತ್ತೆಯಾಗಿದೆ.

ಅರಣ್ಯ ಸಂಪತ್ತು ಸಂರಕ್ಷಣೆಗೆ ಇಷ್ಟೊಂದು ನಿರ್ಲಕ್ಷವೇ :
ಮುಂಡಗೋಡ ತಾಲೂಕಿನ ಪ್ರಾಕೃತಿಕ ಸಂಪತ್ತು ರಾಜ್ಯದಲ್ಲಿ ವಿಶೇಷವಾದುದು ಇಲ್ಲಿನ ಸಾಗುವಾನಿ, ಸೀಸಂ, ಶ್ರೀಗಂಧ ಮರಗಳ ಗುಣಮಟ್ಟ ಅತ್ಯುನ್ನತ ಮಟ್ಟದಲ್ಲಿದ್ದು ಇವುಗಳಿಗೆ ಭಾರೀ ಬೇಡಿಕೆ ಇದೆ ಇವುಗಳನ್ನೇ ಬಂಡವಾಳ ಮಾಡಿಕೊಂಡ ಕಳ್ಳ ಕಾಕರು, ಕೆಲವರ ಜೊತೆ ಶಾಮೀಲಾಗಿ ನಿರಂತರವಾಗಿ ಅರಣ್ಯದ ಹಗಲು ದರೋಡೆಗೆ ನಿಂತಿದ್ದು ಇದಕ್ಕೆ ಅಧಿಕಾರಿ ವರ್ಗ ಬೆಂಬಲವಾಗಿ ನಿಂತಿದೆ ಎಂಬ ಅನುಮಾನ ಸಹಜವಾಗಿ ಮೂಡುತ್ತಿದೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ