ಬಳ್ಳಾರಿ / ಕಂಪ್ಲಿ : ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ನಡೆಯಿತು.
ತಾಲೂಕಿನ ಅರ್ಹ ಫಲಾನುಭವಿಗಳು ಈ ಯೋಜನೆಗಳ ಲಾಭ ಪಡೆಯಲು ನೆರವಾಗಬೇಕು, ಪ್ರತಿ ತಿಂಗಳು ಆಯಾ ಇಲಾಖೆಯಲ್ಲಿ ನಡೆಯುವ ಮಾಸಿಕ ಸಭೆಗಳಲ್ಲಿ ಭಾಗವಹಿಸಿ, ಗ್ಯಾರಂಟಿ ಯೋಜನೆಯ ಅನುಷ್ಠಾನದ ಬಗ್ಗೆ ಚರ್ಚಿಸಿ, ಫಲಾನುಭವಿಗಳಿಗೆ ಒದಗಿಸಬೇಕು ಎಂದು ಅಧ್ಯಕ್ಷ ಕೆ. ಶ್ರೀನಿವಾಸರಾವ್ ತಿಳಿಸಿದರು.
ಗೃಹ ಲಕ್ಷ್ಮೀ ಯೋಜನೆಯು ಆಗಸ್ಟ್ 2023ರರಿಂದ ಜನವರಿ 2025ವರೆಗೆ ತಾಲೂಕಿನಲ್ಲಿ ಸುಮಾರು 4.80.717 ಫಲಾನುಭವಿಗಳು ಹೊಂದಿದ್ದು, ಸುಮಾರು 96.14 ಕೋಟಿ ಹಣ ಬಿಡುಗಡೆಯಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಸಿಡಿಪಿಒ ಕೆ. ಮೋಹನ್ ಮಾಹಿತಿ ನೀಡಿದರು.
ಜೆಸ್ಕಾಂ ಎ.ಇ ಭೀಮೇಶ ಅವರು ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದ ಫಲಾನುಭವಿಗಳಿಗೆ ಇಲಾಖೆಯು ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.
ಆಹಾರ ಇಲಾಖೆಯ ಡಿ.ಒ ಪರಶುರಾಮ ಮಾತನಾಡಿ, ಒಟ್ಟು 394423 ಪಡಿತರ ಚೀಟಿಗಳಿದ್ದು, ಸುಮಾರು 1454634 ಫಲಾನುಭವಿಗಳಿದ್ದು, ಸುಮಾರು 236705110 ವೆಚ್ಚ ಭರಿಸಿದೆ. ಪ್ರತಿ ತಿಂಗಳು ಅಕ್ಕಿ ವಿತರಿಸಲಾಗುತ್ತಿದೆ ಎಂದರು.
ಡಿಸ್ಟಿಕ್ ಕೌನ್ಸಿಲರ್ ವೆಂಕಟೇಶ ಇವರು ಯುವನಿಧಿ ಯೋಜನೆ ಹಾಗೂ ಸಾರಿಗೆ ಇಲಾಖೆಯ ಸಂಚಾರಿ ನಿಯಂತ್ರಣಾಧಿಕಾರಿ ಆದಿಶೇಷ ಇವರು ಶಕ್ತಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್. ಕೆ. ಶ್ರೀಕುಮಾರ, ಎಸ್ ಡಿ ಎ ಸುರೇಶ ಬಂಡಾರಿ, ಸಮಿತಿ ಸದಸ್ಯರಾದ ಶಿವಕುಮಾರ, ಶಿವರಾಜಕುಮಾರ, ವಿ.ರಮೇಶ, ಗೌಡ್ರು ಕೆ.ಸಿದ್ದಪ್ಪ, ಎಂ.ರಾಜಾಭಕ್ಷಿ, ತಿಮ್ಮಪ್ಪ, ಸಿ.ವಿಜಯಲಕ್ಷ್ಮಿ, ರೇಣುಕಮ್ಮ ಸೇರಿದಂತೆ ತಾ. ಪಂ. ಸಿಬ್ಬಂದಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
