ಬಳ್ಳಾರಿ / ಕಂಪ್ಲಿ : ತಾಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ಸೇವಕ ಹೈದ್ರಾಬಾದಿನ ವೆಂಕಟೇಶ ಇವರು ಬಡಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ವಿದ್ಯಾರ್ಥಿಗಳಿಗೆ ಇಂದು ಉಚಿತ ನೋಟ್ ಬುಕ್ ವಿತರಿಸಿದರು.
ನಂತರ ಮುಖ್ಯಶಿಕ್ಷಕಿ ಜೆ.ಅರುಣಾ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಮಕ್ಕಳು ಶಿಕ್ಷಣವಂತರಾದರೆ ಭವಿಷ್ಯ ಉಜ್ವಲವಾಗಿರಲು ಸಾಧ್ಯ. ಇಲ್ಲಿನ ಬಡಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕೆಂಬ ಹಿನ್ನಲೆಯಲ್ಲಿ ಸಮಾಜ ಸೇವಕ ವೆಂಕಟೇಶ ಅವರು ಹೈದ್ರಾಬಾದಿನಿಂದ ಇಲ್ಲಿನ ಪ್ರೌಢಶಾಲೆಯ 8,9 ಹಾಗೂ 10ನೇ ತರಗತಿಯ ಒಟ್ಟು 36 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದಾರೆ. ಆದ್ದರಿಂದ ಮಕ್ಕಳಿಗೆ ವಿತರಿಸಿದ್ದು, ಇದರ ಸದುಪಯೋಗದೊಂದಿಗೆ ವಿದ್ಯಾರ್ಥಿಗಳು ಶಿಕ್ಷಣವಂತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಕರಿಬಸಯ್ಯಸ್ವಾಮಿ, ಮುಖಂಡರಾದ ಎಂ. ಗುರುರಾಜ, ಕಡ್ಡಿ ವೀರಭದ್ರಪ್ಪ ಸೇರಿದಂತೆ ಸಹ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
