ಗ್ರಾಮದ ಪಕ್ಕದಲ್ಲೇ ನದಿ ಇದ್ದರೂ
ಶುದ್ಧ ಕುಡಿಯುವ ನೀರಿಲ್ಲದೆ ಪರದಾಡುತ್ತಿರುವ ಸವದಿ ಜನತೆ..!!!
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದ್ದು ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಊರಿನ ಪಕ್ಕದಲ್ಲಿ ನದಿ ಇದ್ದರೂ ಕೂಡಾ ಇವರಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.
ಸರ್ಕಾರದವರು ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿಗೋಸ್ಕರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಲೇ ಇದ್ದಾರೆ. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳು ಮಾತ್ರ ಬಂದ್ ಬಿದ್ದಿವೆ.
ಶುದ್ಧ ನೀರಿಗೋಸ್ಕರ ಸವದಿ ಗ್ರಾಮದ ಜನರು ಕಿಲೋಮೀಟರ್ ದೂರದಲ್ಲಿ ಹೋಗಿ ಖಾಸಗಿಯವರ ಒಡೆತನದಲ್ಲಿರುವ ಶುದ್ಧ ನೀರಿನ ಘಟಕದಿಂದ ಶುದ್ಧ ಕುಡಿಯುವ ನೀರನ್ನು ತರುತ್ತಿದ್ದಾರೆ.
ಆದರೂ ಸಹ ಸರ್ಕಾರದಿಂದ ನಿರ್ಮಿಸಿದ ಶುದ್ಧ ನೀರಿನ ಘಟಕ ಬಂದ್ ಬಿದ್ದಿರುವ ಘಟಕದ ದುರಸ್ತಿ ಮಾಡಬೇಕಾದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಈ ಪಂಚಾಯಿತಿ ಕಡೆಗೆ ಸುಳಿಯುವುದೇ ಇಲ್ಲ. ಇದರಿಂದ ಊರಿನ ಸಮಸ್ಯೆಗಳು ಅವರಿಗೆ ಗೊತ್ತೇ ಆಗುವುದಿಲ್ಲ.
ಪಂಚಾಯತಿಯ ಬೋರ್ವೆಲ್ ಇದ್ರೂ ಕೂಡಾ ಅದರಲ್ಲಿ ಜಾಸ್ತಿ ಕೊಳಚೆ ನೀರು ಬರುತ್ತಿದೆ ಇದೇ ನೀರನ್ನು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಜೋಡಣೆ ಮಾಡಲಾಗಿದೆ, ಇದರಿಂದ ರೋಗ ರುಜಿನಗಳು ಹೆಚ್ಚಾಗಿ ಜನರು ಆಸ್ಪತ್ರೆಗೆ ಹೋಗುತ್ತಿದ್ದಾರೆ.
ಸವದಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಂತೂ ಅವರು ಬಂದಾಗಿನಿಂದ 5 ಪೈಸೆ ಕೆಲಸ ಮಾಡಿಲ್ಲ ಊರು ಹೇಗಿದೆಯೋ ಹಾಗೆಯೇ ಇದೆ ಎಂದು ಸವದಿ ಗ್ರಾಮದ ನಾಗರಿಕರಾದ ಬಸವರಾಜ್ ಮಡಿವಾಳ ಅವರು ಗಂಭೀರ ಆರೋಪ ಮಾಡಿದರು.
ಈ ಸುದ್ದಿ ಏನಾದರೂ ನೋಡಿದರೆ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕ ಕಾರ್ಯ ನಿರ್ವಹಣಾಧಿಕಾರಿಗಳು ಜನರಿಗೆ ಶುದ್ಧ ಕುಡಿಯುವ ನೀರನ್ನು ಕೊಡಿ ಎನ್ನುವುದು ನಮ್ಮ ಕಳಕಳಿಯ ವಿನಂತಿ.
ವರದಿ. ವಿಠ್ಠಲ ಖೋಕಾಟೆ ಅಥಣಿ



















