
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ .( ಎಸ್.ಕೆ.ಖಾನಾಪುರ )
ಗ್ರಾಮದ ಶ್ರದ್ದಾನಂದ ಸ್ವಾಮೀಜಿ ಮಠದಲ್ಲಿ ಕೋಟಿ ಜಪಯಜ್ಞ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ಶ್ರದ್ದಾನಂದರ ಶಿಷ್ಯರಾದ ಶ್ರೀ ಕೈಲಾಸಪತಿ ಶ್ರೀಗಳು ಹಾಗೂ ಶ್ರೀ ನೀಲಲೋಹಿತ ಸ್ವಾಮಿಗಳು ಅವರಿಗೆ ಕಿರೀಟ ಹಾಕಿ ಪಾದಪೂಜೆ ಮಾಡುವ ಮೂಲಕ ಕೋಟಿ ಜಪಯಜ್ಞ ಮಹಾ ಮಂಗಲವಾಯಿತು.
ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಶಿವ ಮಹಿಮೆ, ಸ್ತೋತ್ರ, ರುದ್ರಾಭಿಷೇಕ , ಶ್ರೀಗಳಿಂದ ಆಶೀರ್ವಚನ ಹಾಗೂ ಶ್ರೀಗಳ ಪಾದಪೂಜೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ನೆರವೇರಿದವು.
ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಭಕ್ತರು ಪೂಜೆ ವಿಧಿ ವಿಧಾನಗಳನ್ನು ಮಾಡಿದ ನಂತರ ಪ್ರಸಾದವನ್ನು ಸ್ವೀಕರಿಸಿದರು.
ಮೂರು ದಿನಗಳ ಕಾಲ ಅನ್ನ ಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.
ವರದಿ ನಿಂಬಯ್ಯ ಕುಲಕರ್ಣಿ, ಬಾದಾಮಿ
