ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೆಲ ಮಹತ್ವದ ವಿಷಯಗಳ ಕುರಿತು ಚರ್ಚೆ: ರೋಣದ್

ಕಲಬುರಗಿ/ ಚಿತ್ತಾಪುರ: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ರೋಣದ್ ಅವರ ಘನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲ ಮಹತ್ವದ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಜೂ. 21 ರಂದು ರಾಜ್ಯಾಧ್ಯಕ್ಷ ಎಲ್. ಭೈರಪ್ಪನವರು ಆಹ್ವಾನಿಸಿದ ಸಭೆಗೆ ಹಾಜರಾಗಲು ಸಭೆಯು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು, 2025-26 ನೇ ಸಾಲಿಗಾಗಿ ಹೊಸ ಸದಸ್ಯತ್ವದ ಶುಲ್ಕ 100 ರಿಂದ 200 ರೂ. ಮಾಡಲು ಉಪಾಧ್ಯಕ್ಷ ಮಹಾದೇವಪ್ಪ ವಿಷಯ ಪ್ರಸ್ತಾಪಿಸಿದ ನಂತರ ಅದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು.
ಗೌರವಾಧ್ಯಕ್ಷ ವಿಜಯಕುಮಾರ ಲೋಡ್ಡೆನೊರ ಮಾತನಾಡಿ, ಸಂಘದಲ್ಲಿ ಹಣ ಇರುವುದಿಲ್ಲ ಕಾರಣ ಎಲ್ಲಾ ಸದಸ್ಯರು ಪ್ರತಿವರ್ಷ 100 ರೂ. ಜಮಾ ಮಾಡೋಣ ಎಂದು ಹೇಳಿದಾಗ ಸಭೆಯು ಒಪ್ಪಿಕೊಂಡು 2800 ಸಂಘಕ್ಕೆ ವಂತಿಗೆ ಹಣ ನೀಡಿದರು. ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಬೆಂಗಳೂರು ಕೇಂದ್ರ ಸಂಘಕ್ಕೆ ರೂ.2000 ಅಪ್ಲಿಕೇಶನ್ ಶುಲ್ಕ ಕಟ್ಟಬೇಕಾಗಿದೆ ಎಂದು ಸಭೆಗೆ ತಿಳಿಸಿದಾಗ ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.
ಇನ್ನೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಹಲವಾರು ನಿವೃತ್ತ ನೌಕರರ ಸಮಸ್ಯೆಗಳ ಬಗ್ಗೆ ರಾಜ್ಯಾಧ್ಯಕ್ಷ ಎಲ್‌. ಭೈರಪ್ಪನವರು ಸರ್ಕಾರದ ಮುಂದಿಟ್ಟ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಗೌರವ ಅಧ್ಯಕ್ಷ ವಿಜಯಕುಮಾರ ಲೋಡ್ಡೆನೊರ ಉಪಾಧ್ಯಕ್ಷರಾದ ಮಹಾದೇವಪ್ಪ ಉಪ್ಪಾರ, ಶಶಿಧರ ಪಾಟೀಲ್, ಕಾರ್ಯದರ್ಶಿ ಮಲ್ಲಣ್ಣ ಮುಡಬೂಳ, ಖಜಾಂಜಿ ಬಾಬು ಕರದಾಳ, ಸಂಘಟನಾ ಕಾರ್ಯದರ್ಶಿ ಮೋನಯ್ಯ ಪಂಚಾಳ, ಸಂಘಟನಾ ಕಾರ್ಯದರ್ಶಿ ತುಕಾರಾಂ ರಾಠೋಡ, ಸಹ ಕಾರ್ಯದರ್ಶಿ ಬಸವರಾಜ ಬಾಗೋಡಿ, ನಿರ್ದೇಶಕರಾದ ಸುಭಾಷ್ ಮೆಂಗಜಿ, ಸಿದ್ದಯ್ಯ ಸ್ವಾಮಿ ಸ್ಥಾವರಮಮಠ, ದೇವಪ್ಪ ನಂದೂರಕರ್, ಹಾಜಪ್ಪ ಬಿರಾಳ, ರಾಮಣ್ಣ, ಶಾಂತಾಬಾಯಿ, ಸರಳಾಬಾಯಿ, ಚೆನ್ನಮ್ಮ, ಶಂಕರ್ ಮೊದಲೆ, ಬಸವರಾಜ ಅತ್ತಾರ, ಮಹೇಬೂಬ ಅಲಿ, ಮುನಿಯಪ್ಪ, ಶಿವಾಜಿ ನಿಂಬಾಳ್ಕರ್, ಅಬ್ದುಲ್ ನಬಿ, ಶಿವ ನಾಗಪ್ಪ, ಶಿವಲಿಂಗಪ್ಪ, ಹಲವಾರು ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ವರದಿ ಮೊಹಮ್ಮದ್ ಅಲಿ, ಚಿತ್ತಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ