ಕಲಬುರಗಿ/ ಚಿತ್ತಾಪುರ: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ರೋಣದ್ ಅವರ ಘನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲ ಮಹತ್ವದ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಜೂ. 21 ರಂದು ರಾಜ್ಯಾಧ್ಯಕ್ಷ ಎಲ್. ಭೈರಪ್ಪನವರು ಆಹ್ವಾನಿಸಿದ ಸಭೆಗೆ ಹಾಜರಾಗಲು ಸಭೆಯು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು, 2025-26 ನೇ ಸಾಲಿಗಾಗಿ ಹೊಸ ಸದಸ್ಯತ್ವದ ಶುಲ್ಕ 100 ರಿಂದ 200 ರೂ. ಮಾಡಲು ಉಪಾಧ್ಯಕ್ಷ ಮಹಾದೇವಪ್ಪ ವಿಷಯ ಪ್ರಸ್ತಾಪಿಸಿದ ನಂತರ ಅದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು.
ಗೌರವಾಧ್ಯಕ್ಷ ವಿಜಯಕುಮಾರ ಲೋಡ್ಡೆನೊರ ಮಾತನಾಡಿ, ಸಂಘದಲ್ಲಿ ಹಣ ಇರುವುದಿಲ್ಲ ಕಾರಣ ಎಲ್ಲಾ ಸದಸ್ಯರು ಪ್ರತಿವರ್ಷ 100 ರೂ. ಜಮಾ ಮಾಡೋಣ ಎಂದು ಹೇಳಿದಾಗ ಸಭೆಯು ಒಪ್ಪಿಕೊಂಡು 2800 ಸಂಘಕ್ಕೆ ವಂತಿಗೆ ಹಣ ನೀಡಿದರು. ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಬೆಂಗಳೂರು ಕೇಂದ್ರ ಸಂಘಕ್ಕೆ ರೂ.2000 ಅಪ್ಲಿಕೇಶನ್ ಶುಲ್ಕ ಕಟ್ಟಬೇಕಾಗಿದೆ ಎಂದು ಸಭೆಗೆ ತಿಳಿಸಿದಾಗ ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.
ಇನ್ನೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಹಲವಾರು ನಿವೃತ್ತ ನೌಕರರ ಸಮಸ್ಯೆಗಳ ಬಗ್ಗೆ ರಾಜ್ಯಾಧ್ಯಕ್ಷ ಎಲ್. ಭೈರಪ್ಪನವರು ಸರ್ಕಾರದ ಮುಂದಿಟ್ಟ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಗೌರವ ಅಧ್ಯಕ್ಷ ವಿಜಯಕುಮಾರ ಲೋಡ್ಡೆನೊರ ಉಪಾಧ್ಯಕ್ಷರಾದ ಮಹಾದೇವಪ್ಪ ಉಪ್ಪಾರ, ಶಶಿಧರ ಪಾಟೀಲ್, ಕಾರ್ಯದರ್ಶಿ ಮಲ್ಲಣ್ಣ ಮುಡಬೂಳ, ಖಜಾಂಜಿ ಬಾಬು ಕರದಾಳ, ಸಂಘಟನಾ ಕಾರ್ಯದರ್ಶಿ ಮೋನಯ್ಯ ಪಂಚಾಳ, ಸಂಘಟನಾ ಕಾರ್ಯದರ್ಶಿ ತುಕಾರಾಂ ರಾಠೋಡ, ಸಹ ಕಾರ್ಯದರ್ಶಿ ಬಸವರಾಜ ಬಾಗೋಡಿ, ನಿರ್ದೇಶಕರಾದ ಸುಭಾಷ್ ಮೆಂಗಜಿ, ಸಿದ್ದಯ್ಯ ಸ್ವಾಮಿ ಸ್ಥಾವರಮಮಠ, ದೇವಪ್ಪ ನಂದೂರಕರ್, ಹಾಜಪ್ಪ ಬಿರಾಳ, ರಾಮಣ್ಣ, ಶಾಂತಾಬಾಯಿ, ಸರಳಾಬಾಯಿ, ಚೆನ್ನಮ್ಮ, ಶಂಕರ್ ಮೊದಲೆ, ಬಸವರಾಜ ಅತ್ತಾರ, ಮಹೇಬೂಬ ಅಲಿ, ಮುನಿಯಪ್ಪ, ಶಿವಾಜಿ ನಿಂಬಾಳ್ಕರ್, ಅಬ್ದುಲ್ ನಬಿ, ಶಿವ ನಾಗಪ್ಪ, ಶಿವಲಿಂಗಪ್ಪ, ಹಲವಾರು ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ
