ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಚಿರಿಬಿ ರಸ್ತೆಯಲ್ಲಿ ಇರುವ ಇಂದು ಕಾಲೇಜ್ ನಲ್ಲಿ ನಿರುದ್ಯೋಗ ಯುವಕ ಯುವತಿಯರಿಗಾಗಿ ಉದ್ಯೋಗ ಮೇಳವನ್ನು ಸಮರ್ಥನಂ ಅಂಗವಿಕಲರ ಸಂಸ್ಥೆ ಬಳ್ಳಾರಿ ಹಾಗೂ ಇಂದು ಕಾಲೇಜ್ ಕೊಟ್ಟೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿ. 20.06.2025 ರಂದು ಇಂದು ಕಾಲೇಜು ಚಿರಿಬಿ ರಸ್ತೆ, ಕೊಟ್ಟೂರಿನಲ್ಲಿ ಹಮ್ಮಿಕೊಳ್ಳಲಾಗಿದೆ”.
ಸಮಯ ಬೆಳಿಗ್ಗೆ 9:00 ಘಂಟೆಯಿಂದ ಮಧ್ಯಾಹ್ನ 3:00 ಘಂಟೆಯವರೆಗೆ ಈ ಉದ್ಯೋಗ ಮೇಳಕ್ಕೆ ವಯೂಮಿತಿ 18 ರಿಂದ 35 ವರ್ಷ ಇರಬೇಕು ಮತ್ತು ಶೈಕ್ಷಣಿಕ ವಿದ್ಯಾರ್ಹತೆಯು ಎಸ್.ಎಸ್.ಎಲ್.ಸಿ, ಪದವಿ ಪೂರ್ವ ಮತ್ತು ಪದವಿ ಪಡೆದಿರುವಂತಹ ಎಲ್ಲಾ ಉದ್ಯೋಗಾರ್ಥಿ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಹಲವಾರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಈ ಉದ್ಯೋಗ ಮೇಳದ ಉದ್ದೇಶವಾಗಿದೆ. ಈ ಮೇಳದಲ್ಲಿ 20ಕ್ಕೂ ಹೆಚ್ಚು ಉದ್ಯೋಗದಾತರ ಭಾಗವಹಿಸುವಿಕೆಯನ್ನು ನಾವು ನೀರಿಕ್ಷೀಸುತ್ತಿದ್ದೇವೆ. ಹಾಗೂ ಈ ಉದ್ಯೋಗ ಮೇಳದಲ್ಲಿ ವಿಶೇಷಚೇತನರಿಗೆ ಅವಕಾಶವನ್ನು ನೀಡಲಾಗಿದೆ ಆದ ಕಾರಣ ಎಲ್ಲಾ ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಸ್ವ- ವಿವರಗಳೊಂದಿಗೆ ಆಗಮಿಸಿ ಈ ಉದ್ಯೋಗ ಮೇಳದ ಲಾಭವನ್ನು ಪಡೆದು ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಳಕಳಿಯಾಗಿ ವಿನಂತಿಸಿಕೊಳ್ಳುತ್ತಿದ್ದೇವೆ”.
ಈ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಲು ತಮ್ಮ ಅಮೂಲ್ಯವಾದ ಬೆಂಬಲವನ್ನು ಬಯಸುತ್ತಿದ್ದೇವೆ ನಿಮ್ಮ ಬೆಂಬಲವು ಆರ್ಹರನ್ನು ತಲುಪಲು ನಮಗೆ ಸಹಾಯ ಮಾಡುತ್ತದೆ ಮತ್ತು ವಿಕಲಚೇತನರು ಮತ್ತು ವಿಕಲೇತಚೇತನರು ಉದ್ಯೋಗ ಪಡೆಯುವುದರ ಮುಖಾಂತರ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪತ್ರಿಕೋದ್ಯಮದ ಸಹಾಯ ಸಹಕಾರ ಅಪಾರ ಕೊಡುಗೆಯಾಗಲಿದೆ ಎಂದು ಡಾ, ಪಿ ಎಮ್ ವಾಗೀಶಯ್ಯ ಪ್ರಾಂಶುಪಾಲರು ಇಂದು ಕಾಲೇಜ್ ಕೊಟ್ಟೂರು, ರವರು ಹಾಗೂ ಶ್ರೀ ಮೌನೇಶಪ್ಪ ,ಶಾಖೆಯ ಮುಖ್ಯಸ್ಥರು ಸಮರ್ಥನಂ ಅಂಗವಿಕಲರ ಸಂಸ್ಥೆ ಬಳ್ಳಾರಿ ರವರು ನಿರುದ್ಯೋಗ ಯುವಕ ಯುವತಿಯರು ಹೆಚ್ಚಿನ ಮಾಹಿತಿಗಾಗಿ ಕೆಳಗಡೆ ಇರುವ ನಂಬರ್ ಗೆ ಸಂಪರ್ಕಿಸಬಹುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕ ಸಂಖ್ಯೆಗಳು :
+91 9148792888 / 9148793888 / 8152808563 / 9480812138.
