
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಛಲವಾದಿ ನೌಕರರ ಸಂಘದ ವತಿಯಿಂದ ಛಲವಾದಿ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭ ಜರುಗಿತು.
ಈ ಸಂದರ್ಭದಲ್ಲಿ ಛಲವಾದಿ ನೌಕರ ಸಂಘದ ರಾಜ್ಯ್ಯಾಧ್ಯಕ್ಷ ಚಿದಾನಂದ ಕಾಂಬಳೆ ಮಾತನಾಡಿ ಛಲವಾದಿ ಸಮುದಾಯದ ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಛಲವಾದಿ ನೌಕರರ ಸಂಘದಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸತ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು, ಉನ್ನತ ಹುದ್ದೆಗಳನ್ನು ಸ್ವೀಕರಿಸಿ, ಸಮಾಜದ ಹಿಂದುಳಿದ ಕುಟುಂಬಗಳನ್ನು ಮೇಲೆತ್ತುವುದರ ಮೂಲಕ ಸಮಾಜದ ಋಣ ತೀರಿಸಬೇಕೆಂದು ಹೇಳಿದರು.
ಉದ್ದಿಮೆದಾರ ಸುದೀಪ ಕುಮಾರ್ ಮಾತನಾಡಿ ಮುಂಬರುವ ವರ್ಷದಲ್ಲಿ ಛಲವಾದಿ ವಿದ್ಯಾರ್ಥಿಗಳು ಉನ್ನತ ಅಂಕಗಳನ್ನು ಪಡೆದರೆ ನಮ್ಮ ಸಂಸ್ಥೆ ವತಿಯಿಂದ 10 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹ ರೂಪದಲ್ಲಿ ನೀಡಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ್ ಗೆಣ್ಣೂರು ಮಾತನಾಡಿ ಛಲವಾದಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ಬಸವ, ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಮುನ್ನುಗ್ಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜ್ಞಾನಜ್ಯೋತಿ ಬಂತೇಜಿ ಬಸವನಾಗದೇವ ಶರಣರು, ಅಭಿಷೇಕ್ ಚಕ್ರವರ್ತಿ, ಎಚ್ ಬಿ ಸಿಂಗ್ಯಾಗೋಳ್, ಬಾಬು ಗುಡಮಿ, ಸಂತೋಷ್ ಕುಮಾರ್ ಪಿರಗಾ, ಕೆ.ಬಿ. ಕೋರೆ, ಸುರೇಶ್ ದೂ ಲಾರಿ, ಕುಮಾರ್ ಬಾಗೇವಾಡಿ, ಯುವರಾಜ ನಾಟಿಕಾರ್, ರವೀಂದ್ರ ಇರಸೂರ, ಆರತಿ ಮಲ್ಲಾರಿ, ಸುಜಾತ ಚಂಚಲ ಕರ್, ದುರ್ಗಪ್ಪ ಚಲವಾದಿ, ರಾಕೇಶ್ ಇಂಗಳಗಿ, ಶಿವಲಿಂಗ ಕುರೆನ್ನವರ್, ಸಾಬು ಮಮದಾಪುರ್, ಪ್ರೊಫೆಸರ್ ಹೇಮಗಿರಿ, ಬಸವರಾಜ್ ಇಂಗೆ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಮನೋಜ್ ನಿಂಬಾಳ
