ಬಳ್ಳಾರಿ / ಕಂಪಿ : ಕಂಪ್ಲಿ ಪಟ್ಟಣದಲ್ಲಿ ನೂತನವಾಗಿ ಆರಂಭವಾಗಿರುವ ಕೆಸಿಬಿ ಎಜ್ಯುಕೇಷನ್ ಟ್ರಸ್ಟ್ ನ ಆಶ್ರಯದಲ್ಲಿ ನಡೆಯುತ್ತಿರುವ ರೈನ್ಬೋ ನೀಟ್/ಜೆಇಇ ಅಕಾಡೆಮೆಯಲ್ಲಿ ತರಬೇತಿ ಪಡೆದು ಸರ್ಕಾರಿ ವೈದ್ಯಕೀಯ ಸೀಟ್ ಪಡೆದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.ಕೆಸಿಬಿ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್.ಚಾಂದ್ಬಾಷಾ ಮಾತನಾಡಿ, ಅವರು ಪಟ್ಟಣದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ರೈನ್ಬೋ ಪಿಯು ಕಾಲೇಜು ಹಾಗೂ ರೈನ್ಬೋ ನೀಟ್/ಜೆಇಇ ಅಕಾಡೆಮೆ ತರಬೇತಿಯನ್ನು ಆರಂಭಿಸಲಾಗಿದ್ದು, ನಮ್ಮ ಸಂಸ್ಥೆಯು ಆರಂಭಿಸಿದ ತರಬೇತಿ ಕೇಂದ್ರದಲ್ಲಿ ಮೊದಲ ಬಾರಿಗೆ ಮೂರು ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ವಿಭಾಗದ ವಿವಿಧ ವಿಭಾಗಗಳಲ್ಲಿ ಸೀಟ್ಗಳನ್ನು ಪಡೆದು ಸಂಸ್ಥೆಯ ಕೀರ್ತಿಯನ್ನು ಬೆಳಗಿಸಿದ್ದಾರೆಂದರು.
ರೈನ್ಬೋ ನೀಟ್/ಜೆಇಇ ತರಬೇತಿ ಪಡೆದ ಸಣಾಪುರದ ಎಂ.ಕೀರ್ತನಾ(97.12%) ಎಂಬಿಬಿಎಸ್, ಹುಬ್ಬಳ್ಳಿಯ ಎಸ್.ನಂದಿನಿ(90.87%) ಬಿಡಿಎಸ್ ಮತ್ತು ಕಂಪ್ಲಿ ಸಕ್ಕರೆ ಕಾರ್ಖಾನೆಯ ಎಂ.ವಾಸುದೇವ್(89.54%) ಬಿಎಎಂಎಸ್ ವೈದ್ಯಕೀಯ ವಿಭಾಗದಲ್ಲಿ ಸರ್ಕಾರಿ ಸೀಟ್ಗಳನ್ನು ಪಡೆದಿದ್ದಾರೆಂದು ತಿಳಿಸಿದರು. ನಂತರ ಎಂಬಿಬಿಎಸ್ ವೈದ್ಯಕೀಯ ಸೀಟ್ ಪಡೆದ ವಿದ್ಯಾರ್ಥಿನಿ ಎಂ.ಕೀರ್ತನಾ ಮತ್ತು ಅವರ ತಂದೆ,ತಾಯಿಗಳಾದ ಶ್ರೀನಿವಾಸ್,ಎಂ.ಶಾರದಾ ಅವರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೆಸಿಬಿ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಶಾರುಖ್, ಪ್ರಾಚಾರ್ಯ ಶ್ರೀನಿವಾಸ್, ಉಪ ಪ್ರಾಚಾರ್ಯ ಶಂಶೇರ್, ಉಪನ್ಯಾಸಕರಾದ ಮೇಘ,ಶ್ರೀದೇವಿ, ಆಯುಷ್, ರೋಹಿತ್, ಮಹ್ಮದ್, ಅನಿಲ್, ಜಡೆಪ್ಪ, ಬಶೀರ್, ಪರಮೇಶ್ವರರೆಡ್ಡಿ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















