ಬಳ್ಳಾರಿ / ಕಂಪ್ಲಿ : ಯೋಗ ಎಂಬುವುದು ಆರೋಗ್ಯ ವೃದ್ಧಿಸಲು ಹಾಗೂ ನಮ್ಮ ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿ ಅಭಿವೃದ್ಧಿಯಾಗಲು ಮೂಲ ಮಂತ್ರವಾಗಿದೆ ಎಂದು ಕೆಸಿಬಿ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್.ಚಾಂದ್ ಬಾಷಾ ಹೇಳಿದರು.
ಸ್ಥಳೀಯ ಸಣಾಪುರ ರಸ್ತೆಯಲ್ಲಿರುವ ರೈನ್ ಬೋ ಕಾಲೇಜಿನಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಒಂದು ದಿನಕ್ಕೆ ಇದು ಸೀಮಿತವಾಗಬಾರದು ಪ್ರತಿದಿನ ಪ್ರತಿಯೊಬ್ಬರೂ ಯೋಗವನ್ನು ಅನುಸರಿಸಿ ಮನೆಯಲ್ಲಿ ಅಥವಾ ಇನ್ನಿತರ ಸ್ಥಳಗಳಲ್ಲಿ ನಮ್ಮ ಜೊತೆ ನಮ್ಮ ಸ್ನೇಹಿತರುಗಳಿಗೆ ಯೋಗವನ್ನು ಕಲಿಸುವುದರೊಂದಿಗೆ ಜೀವನ ಪರ್ಯಂತ ನಾವು ಮಾಡಿಕೊಂಡು ಹೋಗಿದ್ದಲ್ಲಿ ಮಾತ್ರ ಆರೋಗ್ಯ ವೃದ್ಧಿಯಾಗಲು ಸಾಧ್ಯ ಎಂದರು.
ಕೆಸಿಬಿ ಎಜ್ಯುಕೀಷನ್ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಶಾರುಖ್ ಮಾತನಾಡಿ, ಭಾರತಾದ್ಯಂತ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುತ್ತಿದೆ. ನಾವೆಲ್ಲರೂ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ವ್ಯಾಯಾಮ ಯೋಗ, ವಾಯುವಿಹಾರ, ಮಾಡಿದರೆ ಮಾತ್ರ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಪ್ರತಿಯೊಬ್ಬರೂ ಯುವಕರು ವಯಸ್ಕರು, ವೃದ್ಧರು, ಯೋಗ ಮಾಡಿದರೆ ಹೆಚ್ಚಿನ ವರ್ಷ ಯಾವುದೇ ಕಾಯಿಲೆಗಳು ಇಲ್ಲದೆ ಬದುಕುವ ಮೂಲಕ ಸುಖಿಯಾಗಿರಬಹುದು ಎಂದು ತಿಳಿಸಿದರು.
ಯೋಗಪಟು ಸಣಾಪುರ ನಾಗಪ್ಪ, ಯೋಗ ಶಿಕ್ಷಕಿ ಉಮಾ ಇವರು ಯೋಗಾಸನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಶ್ರೀನಿವಾಸ್, ಉಪನ್ಯಾಸಕಿ ಮೇಘ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















