ಬಳ್ಳಾರಿ/ ಕಂಪ್ಲಿ : ಪಟ್ಟಣದ ಸಕ್ಕರೆ ಕಾರ್ಖಾನೆಯ ಚಿಕ್ಕಜಾಯಿಗನೂರು ರಸ್ತೆಯ ಸೋಮಪ್ಪ ಬಡಾವಣೆ ಬಳಿಯಲ್ಲಿರುವ ಉಗ್ರಾಣ ಗೋದಾಮಿಗೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ ಅವರು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಾತನಾಡಿ, ಇಲ್ಲಿನ ಉಗ್ರಾಣ ಗೋದಾಮಿನಲ್ಲಿ ಗುಣಮಟ್ಟದ ಜೋಳ ಸೇರಿದಂತೆ ದವಸಧಾನ್ಯಗಳನ್ನು ಸಂಗ್ರಹಿಸಿಡಬೇಕು. ಆಹಾರ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ, ಗೋದಾಮು ಕಡೆಗೆ ಹೆಚ್ಚಿನ ಮುತುವರ್ಜಿಹಿಸಿ ನೋಡಿಕೊಳ್ಳಬೇಕು. ದವನಧಾನ್ಯ ಸಂಗ್ರಹದಲ್ಲಿ ಯಾವುದೇ ಅವ್ಯವಹಾರವಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ ನಾಯಕ, ಆಹಾರ ನಾಗರಿಕರ ಸಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಅಧಿಕಾರಿ ಶಕೀನಾಬೇಗಂ, ಉಗ್ರಾಣ ನಿಗಮದ ಶಾಖಾ ಮ್ಯಾನೇಜರ್ ಅಂಬರೀಶ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















