ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕು ಕಛೇರಿ, ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಶ್ರೀಮತಿ ಎಂ ಪ್ರತಿಭಾ ಗ್ರೇಡ್-2 ತಹಶೀಲ್ದಾರ್ ಇವರ ನೇತೃತ್ವದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಇವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಡಾ.ಫ.ಗು.ಹಳಕಟ್ಟೆಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುತ್ತಾ, ಸುಮಾರು 20 ವರ್ಷಗಳ ನಿರಂತರ ಪರಿಶ್ರಮದಿಂದ ತಾಳೆಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಮುದ್ರಣ ಮಾಡಿ ಸುಮಾರು 300ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು.
ಆ ಮೂಲಕ ವಚನಗಳನ್ನು ಸಂರಕ್ಷಿಸಿದ ಕಾರಣ ಇವರನ್ನು “ ವಚನ ಪಿತಾಮಹಾ ” ಎಂದು ಕರೆಯಲಾಗುತ್ತದೆ. ಇವರ ಸೇವೆಯನ್ನು ಸ್ಮರಿಸುತ್ತಾ ಸರ್ಕಾರವು ಈ ದಿನವನ್ನು “ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ”ಯಾಗಿ ಆಚರಿಸಲಾಗುತ್ತಿದೆ. 12ನೇ ಶತಮಾನರ ಬದುಕನ್ನು, ಅವರ ವಚನಗಳನ್ನ ಸಂರಕ್ಷಿಸಿ ಉಳಿಸಿದ ಇವರ ಸೇವೆಯನ್ನು ನೇವೆಲ್ಲಾ ಸ್ಮರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕಛೇರಿಯ ಸಿಬ್ಬಂದಿಯವರು ಹಾಜರಿದ್ದರು.
ವರದಿ ಶಶಾಂಕ್ .ಪಿ.



















