ಬಳ್ಳಾರಿ/ ಕಂಪ್ಲಿ : ಸಮೀಪದ ಎಂ ಸೂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಯು. ಶ್ರೀನಿವಾಸ್ ಅವರ ವಯೋನಿವೃತ್ತಿ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭ ಜರಗಿತು.
ಈ ವೇಳೆ ನಿವೃತ್ತ ಪ್ರಾಚಾರ್ಯ ಮಹಾಬಲೇಶಪ್ಪ ಮಾತನಾಡಿ ಶ್ರೀನಿವಾಸ್ ಅವರು ಬಹಳ ಸರಳ ಸಜ್ಜನಿಕೆ ವ್ಯಕ್ತಿ, ಪರಿಣಾಮಕಾರಿಯಾದ ಪಾಠ ಬೋಧನೆ ಮೂಲಕ ಎಲ್ಲಾ ವಿದ್ಯಾರ್ಥಿಗಳ ಮನಸ್ಸು ಗೆದ್ದ ಉತ್ತಮ ಶಿಕ್ಷಕ ಎಂದರು.
ಪೂರ್ವದಲ್ಲಿ ಯು. ಶ್ರೀನಿವಾಸ್ ದಂಪತಿಗಳನ್ನು 1997 98ನೇ ಸಾಲಿನಲ್ಲಿ ಶಿಕ್ಷಣ ಕಲಿತ ವಿದ್ಯಾರ್ಥಿ ತಂಡದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್. ರಾಮಪ್ಪ, ಕುಮಾರಸ್ವಾಮಿ, ರಾಜಕುಮಾರ, ಜಡಪ್ಪ, ಬಸವರಾಜ್ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















