ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ವ್ಯಾಪ್ತಿಗೆ ಬರುವ ರುಮ್ಮನ ಗೂಡ ಗ್ರಾಮ ಪಂಚಾಯತಿಯಲ್ಲಿ ಗ್ರಾಮದ ಜನರಿಗೆ ಸಿಗಬೇಕಾದ ಮೂಲ ಸವಲತ್ತುಗಳು ಮತ್ತು ಕುಡಿಯುವ ನೀರು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಕಾರಣ ಸರಕಾರದಿಂದ ಬಂದ 15ನೇ ಹಣಕಾಸಿನ ಅನುದಾನದವು ರುಮ್ಮನಗೂ ಡ್ ಗ್ರಾಮ ಪಂಚಾಯತಿಗೆ ಬಂದಿರುತ್ತದೆ. ಇದರಲ್ಲಿ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಕೂಡಿ ಈ ಹಣವನ್ನು ದೋಚಿರುತ್ತಾರೆ. ಅದಕ್ಕಾಗಿ ಇವರ ಮೇಲೆ ಸೂಕ್ತವಾದ ಕಾನೂನು ರೀತಿಯಲ್ಲಿ ಕ್ರಮ ತಗೊಳ್ಳಬೇಕು ಮತ್ತು ಇವರನ್ನು ಕೂಡಲೇ ಅಧಿಕಾರದಿಂದ ವಜಾಗೊಳಿಸಬೇಕೆಂದು ಕರಣ ಜಿ ರಾಜಪುರ್ ಅಧ್ಯಕ್ಷರು ಮಾ. ದಂ. ಹೋ.ಸಮಿತಿ ಕಾಳಗಿ ರವರು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಕಾಳಗಿ ಇವರಿಗೆ ಮನವಿ ಕೊಟ್ಟು ಆಗ್ರಹಿಸಿದರು.
ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಕಂಬಗಳಿಗೆ ಬೀದಿ ದೀಪ ಅಳವಡಿಸುವುದು, ವಸತಿ ಯೋಜನೆಯಲ್ಲಿ ಬಿ ಪಿ ಎಲ್ ಕಾರ್ಡುದಾರರಿಗೆ ಫೋಟೋ ಅಳವಡಿಸಲು ಲಂಚ ಕೇಳುತ್ತಿರುವುದು ಇದನ್ನು ನಿಲ್ಲಿಸಬೇಕು. ಪಿ ಡಿ ಓ ಅವರನ್ನು ಅಧಿಕಾರದಿಂದ ವಜಾಗೊಳಿಸಬೇಕೆಂದು ಒಂದು ವೇಳೆ ಇವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಮಾದಿಗ ದಂಡೋರ ಹೋರಾಟ ಸಮಿತಿ ಕಾಳಗಿ ರವರು ಒತ್ತಾಯಿಸುತ್ತಾರೆ.
ಈ ಸಂದರ್ಭದಲ್ಲಿ ಕರಣ ಜಿ ರಾಜಾಪೂರ ಅಧ್ಯಕ್ಷರು ಮಾ. ದಂ. ಹೋ. ಸಮಿತಿ ಕಾಳಗಿ, ಹಣಮಂತ್ ಮೇಲಿನಕೇರಿ ರುಮ್ಮನಗೂಡ, ಸುಂದರ್ ಡಿ ಸಾಗರ್ ಮಾ. ದಂ. ಜಿಲ್ಲಾ ಅಧ್ಯಕ್ಷರು, ವೀರಣ್ಣ ಗಂಗಾಣಿ ರೈತ ಸೇನೆ ತಾಲೂಕ ಅಧ್ಯಕ್ಷರು ಕಾಳಗಿ, ಡೇವಿಡ್ ರುಮ್ಮನ್ ಗೂಡ, ಶ್ರೀಕಾಂತ್ ಸಜ್ಜನ್, ಭೀಮು ರಟಕಲ್, ಮಲ್ಲಿಕಾರ್ಜುನ್ ಗೋಟುರ, ಸುರೇಶ್ ಕೋಡ್ಲಿ, ಪಿಂಟು ಕೋಡ್ಲಿ, ಪೀರಪ್ಪ ಸಾಲಹಳ್ಳಿ ಆನಂದ್ ಯಲಕಪಳ್ಳಿ, ಅನಿಲ್ ಹೆಬ್ಬಾಳ, ಚಂದ್ರಕಾಂತ್ ಸರ್, ಸುರೇಶ ಮೇಲಿನಕೇರಿ, ಸಂತೋಷ್ ಸಾಸರ್ ಗಾಂವ್, ಕಾಶಪ್ಪ ಮಾಸ್ಟರ್, ಮತ್ತು ರುಮ್ಮನಗೂಡ ಗ್ರಾಮದ ಜನರು ಭಾಗವಹಿಸಿದ್ದರು.
ವರದಿ ಚಂದ್ರಶೇಖರ್ ಪಾಟೀಲ್



















