ಹಾರುತಿದೆ ಗಗನಕ್ಕೆ ಭಾರತದ ಕೀರ್ತಿ ಪತಾಕೆ..
ತೋರುತಿದೆ ವಿಶ್ವಕೆ ಸಾಧನೆಗಳು ಸಾಲು ಸಾಲು..
ಇದು ನಮ್ಮಹೆಮ್ಮೆಯ ತ್ರಿವರ್ಣ ಧ್ವಜವು …
ಭಾರತೀಯರೆಲ್ಲರಿಗೆ ಪರಮ ಪೂಜ್ಯವೂ ..
ಶೌರ್ಯ, ಬಲದ ಪ್ರತೀಕ ಕೇಸರಿ ವರ್ಣವು..
ದೇಶಭಕ್ತರ ತ್ಯಾಗದಿಂದ ಭಾರತ ಧನ್ಯವು..
ಅಂಬರ ಚುಂಬಿಸುವ ಹಿಮಾಲಯ ತಾಣ
ದೇಶರಕ್ಷಣೆಗಾಗಿ ನಿಂತ ಶಿವನ ಆ ವಾಸಸ್ಥಾನ..
ಧರ್ಮಚಕ್ರ ಎತ್ತಿಹಿಡಿದ ಪುಣ್ಯಭೂ ಮಿಯು ..
ಸತ್ಯಶಾಂತಿಯ ಪ್ರತಿನಿಧಿ ಶ್ವೇತ ವರ್ಣವು..
ಅದ್ಭುತ ಸೌಂದರ್ಯ ವನಸಿರಿಯ, ನಿಸರ್ಗ ಮಾತೆ ..
ಹಸಿರುವರ್ಣವು ಹಾಡುತಿದೆ ಸಂಪದ್ಭರಿತ ಯಶೋಗಾಥೆ.
ಹಾರುತಿದೆ ಮುಗಿಲೆತ್ತರಕೆ ಭಾರ ತದ ಕೇತನ..
ಭಾರತೀಯರ ಸ್ವಾಭಿಮಾನದ ದಿವ್ಯ ಚೇತನ..
ಸತ್ಯಶಾಂತಿ, ಧೀರಯೋಧರ ನಾಡಲಿ ಹುಟ್ಟಿ ಧನ್ಯಳಾದೆ..
ಭಾರತಾಂಬೆಯ ಚರಣಕೆ ಶರಣು ಶರಣೆಂಬೆ…
- ವೀಣಾ ಸುಧೀಂದ್ರ ,ಬೆಂಗಳೂರು
93435 97846.



















