ಶಿವಮೊಗ್ಗ : ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಹೆಚ್ಚು ಅಂಕಗಳಿಸಿದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿತ್ತು.
ಕುವೆಂಪು ರಂಗ ಮಂದಿರದಲ್ಲಿ ಸಂಸದ ಬಿ. ವೈ. ರಾಘವೇಂದ್ರ ಉದ್ಘಾಟಿಸಿದರು.
ಮಕ್ಕಳು ದೊಡ್ಡ ವ್ಯಕ್ತಿಗಳು ತಮ್ಮ ರೋಲ್ ಮಾಡೆಲ್ ಎನ್ನುತ್ತಾರೆ ಆದರೆ ತಂದೆ ತಾಯಿ ತಮ್ಮ ಮಾದರಿ ವ್ಯಕ್ತಿ ಎಂದು ಹೇಳುವಂತ ಸಂಸ್ಕಾರ ಬೆಳೆಸಬೇಕಿದೆ ಸ್ಪರ್ಧಾತ್ಮಕ ಶಿಕ್ಷಣದ ಜೊತೆಗೆ ಮಕ್ಕಳಿಗೆ ವಿನಯವೂ ಬೇಕಾಗಿದೆ. ತಂತ್ರಜ್ಞಾನ ಯುಗ ಆಗಿದ್ದರಿಂದ ಪಾಲಕರು ಮಕ್ಜಳ ಮೇಲೆ ಹೆಚ್ಚಿನ ನಿಗಾ ಇಡಬೇಕಾಗಿದೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ಮಾತನಾಡಿ ಗುರಿ ಮತ್ತು ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ ಹದಿ ಹರೆಯದವರನ್ನು ವ್ಯಾಮೋಹ, ಮಾಫಿಯಾಗಳು ಸೆಳೆಯುತ್ತವೆ. ಇಂತಹ ವ್ಯವಸ್ಥೆಗೆ ಶರಣಾದರೆ ಪೋಷಕರ ಕಷ್ಟಕ್ಕೆ ಬೆಲೆ ಇಲ್ಲದಂತಾಗುತ್ತದೆ ಆದ್ದರಿಂದ ಮಕ್ಕಳು ತಪ್ಪು ಹೆಜ್ಜೆ ಇಡದಂತೆ ಪೋಷಕರು ಎಚ್ಚರ ವಹಿಸಬೇಕು ಎಂದು ಹೇಳಿದರು.
ವರದಿ : ಪ್ರಸಾದ್ ಹೆಚ್ ಬಿ, ತೀರ್ಥಹಳ್ಳಿ.




















