೧. ಕವಿ.
ಕಲ್ಪನಾ ಲೋಕದಲಿ
ಈಜಾಡಿ ಶಬ್ದಗಳನು ಹೆಕ್ಕಿ
ಪದಗಳನು ಪೋಣಿಸಿ,
ಕವನವೆಂಬ ಮಾಲೆಯ,
ಕಟ್ಟುವ ಕಲಾಕಾರ.
೨. ಭಾವ ಜೀವಿ.
ಭಾವನೆಗಳಿಗೆ ಜೀವ ತುಂಬಿ
ಅಕ್ಷರಗಳಿಗೆ ರೂಪ ನೀಡಿ
ಶಬ್ದಗಳ ಜೊತೆಗೆ ಸರಸವಾಡಿ
ಸೌಂದರ್ಯವ ಆರಾಧಿಸುವ
ಭಾವನಾ ಜೀವಿ, ಕವಿ.
೩. ನಿನ್ನಂತೆ ನೀನಾಗು.
ನಾ ಆವರಂತಾಗಬೇಕು
ನಾ ಇವರಂತಾಗಬೇಕು
ಎಂಬ ಭ್ರಮಾಲೋಕದ
ಪರದೆಯ ಸರಿಸಿ,
ನಿನ್ನಂತೆ ನೀನಾಗು ಸಾಕು.
೪. ಮಾನವ.
ಆಕಾಶದಲಿ ಹಾರುವುದನು
ಕಲಿತ,ಆದರೆ ಇದೇ ಸಮಯದಲ್ಲಿ ಭೂಮಿಯ
ಮೇಲೆ ಬಾಳುವುದನು
ಮರೆತ ಬುಧ್ಧಿಜೀವಿ!
- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು, ಕೊಪ್ಪಳ. 583231.
ಮೊಬೈಲ್ ಸಂಖ್ಯೆ 7996790189.



















