ಶಿವಮೊಗ್ಗ/ ತೀರ್ಥಹಳ್ಳಿ :ಮಾದವ ಮಂಗಳ ಸಭಾಂಗಣದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಎಲ್ ಎಸ್ ಶ್ರೀಕಾಂತ್ ಭಟ್ , ಕಾರ್ಯದರ್ಶಿಯಾಗಿ ಜಿ ಲಿಂಗರಾಜು ಹಾಗೂ ಖಜಾಂಚಿಯಾಗಿ ಲ ಪ್ರಶಾಂತ್ ಹೆಗ್ಗರ್ ರವರು ಪದಗ್ರಹಣ ಮಾಡಿದರು. ಜಿಲ್ಲಾ ಉಪ ಗವರ್ನರ್ ಹರಿಪ್ರಸಾದ್ ರೈ ರವರು ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಈ ವರ್ಷ ಅಂತರಾಷ್ಟ್ರೀಯ ಮುಖ್ಯಸ್ಥರು ಭಾರತ ದೇಶದವರಾದ ಎ ಪಿ ಸಿಂಗರವರು ಎಂದು ಹೇಳಲು ನಮಗೆಲ್ಲ ಹೆಮ್ಮೆ ಎಂದರು.
ಪದಗ್ರಹಣ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷರಾದ ಶ್ರೀಕಾಂತ್ ಭಟ್ ರವರು ನಾನು ಮಾತಿಗಿಂತ ಕೃತಿ ಮೂಲಕ ಗುರುತಿಸಿ ಕೊಳ್ಳಬೇಕೆಂದಿರುವೆ ಎಂದು ಹೇಳಿದರು. ನಿರ್ಗಮನ ಅಧ್ಯಕ್ಷರು ಎನ್ ಎಸ್ ಮುರುಳಿ ಕಳೆದ ಒಂದು ವರ್ಷದ ಅವಧಿಯಲ್ಲಿ ಅನೇಕ ಸಮಾಜ ಮುಖಿ ಕಾರ್ಯಕ್ರಮ ಮಾಡಿದ್ದ ತೃಪ್ತಿ ಇದ್ದು ತಮಗೆ ಸಹಕರಿಸಿದವರಿಗೆಲ್ಲಾ ಕೃತಜ್ಞತೆ ಸಲ್ಲಿಸಿದರು. ನಿರ್ಗಮಿಸಿದ ಎಲ್ಲಾ ಪದಾಧಿಕಾರಿಗಳು ಹಾಲಿ ಅಧ್ಯಕ್ಷರಿಗೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ವರದಿ :ಪ್ರಸಾದ್ ಹೆಚ್ ಬಿ, ತೀರ್ಥಹಳ್ಳಿ.



















