ಕಲಬುರಗಿ :ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ರಿ.) ಯ ಕಲ್ಬುರ್ಗಿ ಜಿಲ್ಲೆಯ ಉಪಾಧ್ಯಕ್ಷರಾಗಿ ಶ್ರೀ ಶಿವಕುಮಾರ ಪಾಟೀಲ್ ಹೇರೂರು ಮತ್ತು ಶ್ರೀ ಮಲ್ಲಿನಾಥ್ ಶಿವರಾಯ ಪಾಟೀಲ್ ಹುಳಗೇರಾ ಇವರನ್ನು ಕಾಳಗಿ ತಾಲೂಕಿನ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಕರ್ನಾಟಕ ರಾಜ್ಯ ರೈತರ ಉಳಿಗಾಗಿ ಹಾಗೂ ಅಭಿವೃದ್ಧಿಗಾಗಿ ಸ್ವಾಭಿಮಾನಿ ರೈತರ ರಕ್ಷಣೆಗಾಗಿ ಉದಯವಾಗಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷರಾದ ಎಚ್ ಆರ್ ಬಸವರಾಜಪ್ಪ ಮತ್ತು ಸೋಮನಗೌಡ ಪಾಟೀಲ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಇವರಗಳ ಆದೇಶದ ಮೇರೆಗೆ ಶ್ರೀಮಾನ ಶಿವರಾಜ ಪಾಟೀಲ್ ಗೋಣಿಗಿ ಕಲಬುರ್ಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಉಪಾಧ್ಯಕ್ಷರಾಗಿ ಶ್ರೀ ಶಿವಕುಮಾರ ಪಾಟೀಲ್ ಹೇರೂರು ಮತ್ತು ಶ್ರೀ ಮಲ್ಲಿನಾಥ್ ತಂದೆ ಶಿವರಾಯ ಪಾಟೀಲ್ ಹುಳಗೇರಾ ಇವರನ್ನು ಕಾಳಗಿ ತಾಲೂಕಿನ ಉಪಾಧ್ಯಕ್ಷರಾಗಿ ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಶಿವರಾಜ ಪಾಟೀಲ್ ಗೋಣಗಿ ತಿಳಿಸಿರುತ್ತಾರೆ. ಇಂದಿನಿಂದಲೇ ನೀಡುವ ಹುದ್ದೆಯನ್ನು ಜವಾಬ್ದಾರಿಯಿಂದ ಕಲಬುರ್ಗಿ ಜಿಲ್ಲೆ ಉಪಾಧ್ಯಕ್ಷರಾಗಿ ನಿಷ್ಠಾವಂತರಾಗಿ ಕಾರ್ಯ ನಿರ್ವಹಿಸಿಕೊಂಡು ಇಲ್ಲಿ ಇರುವಂತಹ ಸಮಸ್ಯೆಗಳನ್ನು ತೆಗೆದುಕೊಂಡು ನ್ಯಾಯ ಬದ್ಧ ಸಂವಿಧಾನ ರೈತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಿವಕುಮಾರ ಪಾಟೀಲ್ ಹೇಳಿದರು. ಹತ್ತಾರು ರೈತರೊಂದಿಗೆ ಅಧಿಕಾರದ ಪತ್ರ ನೀಡಲಾಯಿತು.
ಈ ಸಮಯದಲ್ಲಿ ಸೋಮನಗೌಡ ಪಾಟೀಲ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು. ಶಿವರಾಜ ಪಾಟೀಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು. ವೀರಣ್ಣ ಗಂಗಾಣಿ ತಾಲೂಕ ಅಧ್ಯಕ್ಷರು, ಜಗನ್ನಾಥ ಅಲ್ಬ ಹೆಬ್ಬಾಳ್ ಅಧ್ಯಕ್ಷರು, ಉಮೇಶ್ ಪಾಂಚಾಳ ಹೊಳಗೇರಾ, ಸಿದ್ದು ಚಟ್ನಳ್ಳಿ, ತಿಪ್ಪಣ್ಣ ಚನ್ನುರ, ಸಿದ್ದಪ್ಪ ಕಲಶೆಟ್ಟಿ, ಪವನ ಚಿದರಿ, ಅನೇಕ ರೈತರಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್



















