
ಯಾದಗಿರಿ/ ಗುರುಮಠಕಲ್: ಅ.೧೪ ಅಖಂಡ ಭಾರತ ಸಂಕಲ್ಪ ದಿವಸದ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ಕಾರ್ಯಕರ್ತರು ಪಟ್ಟಣದ ನಗರೇಶ್ವರ ದೇವಸ್ಥಾನದಿಂದ ಅಂಬಿಗರ ಚೌಡಯ್ಯನವರ ವೃತ್ತದ ವರೆಗೆ ಪಂಜಿನ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ ನಾರಾಯಣ ನೀರೆಟಿ ಗೌರವ ಅಧ್ಯಕ್ಷರು (ವಿ.ಹಿಂ.ಪ)
ಅಖಂಡ ಭಾರತ ಸಂಕಲ್ಪ ದಿನವನ್ನು ಆಗಸ್ಟ್ 14 ರಂದು ಭಾರತ ವಿಭಜನೆಯ ಕರಾಳ ದಿನವೆಂದು ಮತ್ತೆ ಭಾರತ ಅಖಂಡವಾಗಿಸುವ ಶಪಥ ಮಾಡೋಣ ಎಂದು ಹೇಳಿದರು.
ದೇಶದ ಏಕತೆ, ವಿಭಜನೆಯ ಇತಿಹಾಸ, ಅಖಂಡ ಭಾರತದ ಕನಸು ಕುರಿತಾಗಿ ರವಿ ಪೋತುಲ ಮಾತನಾಡಿ ನೆರದವರಿಗೆ ಅಖಂಡ ಭಾರತ ಸಂಕಲ್ಪ ದಿವಸದ ಆಚರಣೆಯ ಹಿಂದಿನ ವಿಚಾರವನ್ನು ಯುವಕರಿಗೆ ತಿಳಿಸಿದರು.
ಮೆರವಣಿಗೆಯಲ್ಲಿ ಶ್ರೀನಿವಾಸ್ ಯಾದವ್, ಅರುಣ್ ಕೇವ್ಜೀ, ಬಸವರಾಜ್ ಪಡಿಗೆ, ಈರಣ್ಣ ಬಾಗೋಜಿ, ರಾಮು ಕೊಗಂಟಿ, ಲಕ್ಷ್ಮಣ್ ಕುಂಬಾರ, ಜಗದೀಶ್ ಮೆಂಗಜೀ, ಭರತ್ ಮೀಟ್ಟೆ, ವಿಜಯ ರಜಪುತ್, ವಿಶಾಲ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ- ಜಗದೀಶ್ ಕುಮಾರ್ ಭೂಮಾ



















