ಕರುನಾಡು ಕಂಡ ಅಪ್ರತಿಮ
ರಾಜಕಾರಣಿ ದೇವರಾಜ ಅರಸ
ಹುಣಸೂರಿನ ಕಲ್ಲಹಳ್ಳಿಯಲಿ
ಇವರ ಜನನ,
ರಾಜಕೀಯ ರಂಗಕೆ ಆಗಮನ,
ಎಲ್ಲೆಡೆಯಲ್ಲೂ ಸಂಚಲನ,
ಮೈಸೂರಿಗೆ ಕರ್ನಾಟಕವೆಂದು
ಮಾಡಿದರು ನಾಮಕರಣ,
ಪಡೆದರು ಜನರಿಂದ ಜನಾನುರಾಗಿ ಮುಖ್ಯಮಂತ್ರಿ
ಎಂಬ ಅಭಿದಾನ.
ದೀನ ದಲಿತರ ಏಳ್ಗೆಯ ಕನಸು
ಮಾಡಿದರು ತಮ್ಮ ಅವಧಿಯಲಿ ನನಸು.
ಹಾವನೂರು ವರದಿಯನು
ಮಾಡಿ ಅನುಷ್ಠಾನ,
ಜನಪ್ರಿಯರಾದರು ಆ ದಿನ,
ರೈತಾಪಿ ವರ್ಗಕೆ ಕಲ್ಪಿಸಿ ಅನುಕೂಲತೆ,
ತೊಲಗಿಸಲು ಹೆಣಗಿದರು
ಅಸ್ಪೃಶ್ಯತೆ.
ಮುಂದಾಲೋಚನೆಯ
ಅಪರೂಪದ ರಾಜಕಾರಣಿ,
ಆಳಿದರು ನಾಡನ್ನು ಅರಸನಂತೆ
ಅಂತೆಯೇ ಇವರು ದೇವರಾಜ ಅರಸು ಅಂತೆ.
ಇಂದಿವರ ಜನುಮದಿನವಂತೆ,
ನಾಡಿನೆಲ್ಲೆಡೆ ಸಂಭ್ರಮದ ಆಚರಣೆಯಂತೆ,
ಸಮಾಜ ಸುಧಾರಕ ಇವರಂತೆ
ಯಾರೂ ಇಲ್ಲ ಇವರಂತೆ….
- ಶಿವಪ್ರಸಾದ್ ಹಾದಿಮನಿ.✍️
ಕೊಪ್ಪಳ.



















