ಓಂ ಶ್ರೀ ಗಜಾನಂದನ ಗಜಾನನ,
ನಿನಗಿದೋ ನನ್ನ ಪ್ರಥಮ ನಮನ,
ನಿನ್ನ ಪೂಜಿಪೆ ಸಂಕಷ್ಟ ನಿವಾರಕ,
ಜಯ ಅಪಜಯಕೂ ನೀ ಭಾಜಕ.
ಶಿವ ಪಾರ್ವತಿಯ ಪ್ರೇಮದ ಸುತನೆ
ಸುಬ್ರಹ್ಮಣ್ಯನ ಪ್ರೀತಿಯ ಸೋದರನೆ
ಮಾತೆಯ ಆಜ್ಞೆಯನು ಪಾಲಿಸಿದವನೆ
ಪಿತನ ಕೋಪದಿ ಗಜಾನನನಾದವನೆ.
ಮೂಷಿಕ ವಾಹನ ಮೋದಕ ಪ್ರಿಯನೆ,
ಮಾತಾಪಿತರೆ ಎನ್ನಯ ಜಗವೆಂದವನೆ,
ವಿದ್ಯಾ ಬುದ್ಧಿಯ ಸಿದ್ಧಿ ಪ್ರದಾಯಕನೆ,
ದೇವಾದಿ ದೇವರುಗಳ ಗಣಾದೀಶನೆ.
ನಿನ್ನ ನಂಬಿದರೆ ಇರದೆಂದು ಭ್ರಾಂತಿಯು,
ನಿನ್ನ ಪೂಜೆಯು ಜಗಕೆಲ್ಲಾ ಶಾಂತಿಯು,
ನೀನು ಒಲಿದರೆ ಬಾಳೆಲ್ಲವೂ ಧನಕನಕ,
ನೀ ಬಂದೊಮ್ಮೆ ಹರಸೆನ್ನ ಪ್ರಿಯ ಬೆನಕ.
✍️ ಬ್ಯಾಡನೂರು ವೀರಭದ್ರಪ್ಪ ಶಿವಶರಣ.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.



















