
ಆರು ತಿಂಗಳಿಂದ ಈ ಕುರಿತು ಮಾಹಿತಿ ನೀಡಿದರೂ ಮುಂಜಾಗ್ರತೆ ತೆಗೆದುಕೊಳ್ಳದ ಅಧಿಕಾರಿಗಳು.

ಯಾದಗಿರಿ/ ಗುರುಮಠಕಲ್: ತಾಲೂಕಿನ ಗೋಪುಲಪುರ ಗ್ರಾಮದಿಂದ ಎಲ್ಹೇರಿಗೆ ಹೋಗುವ ಮುಖ್ಯರಸ್ತೆಯಲ್ಲಿ ಸತತ ಮಳೆಯಿಂದ ರಸ್ತೆ ಮೇಲೆ ಮಳೆ ನೀರು ಹೆಚ್ಚಾಗಿ ಹರಿದಿರುವ ಕಾರಣ ರಸ್ತೆಯ ಎರಡು ಬದಿಯಲ್ಲೂ ಕೊರೆತ ಉಂಟಾಗಿ ದಿನ ನಿತ್ಯ ಶಾಲೆಗೆ ಬರುವ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗಿದೆ.
ಈ ಕುರಿತು ಇಲ್ಲಿನ ಸಾರ್ವಜನಿಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸಹ ಯಾವುದೇ ಮುಂಜಾಗ್ರತೆ ವಹಿಸದೆ ಇರುವುದರ ಪರಿಣಾಮ ಇಂದು ಟ್ರ್ಯಾಕ್ಟರ್ ವಾಹನ ರಸ್ತೆ ಕುಸಿದು ಅಲ್ಲಿಯೇ ಗುಂಡಿಯಲ್ಲಿ ಬಿದ್ದು ಪರದಾಡುವಂತಾಗಿದೆ.
ರಸ್ತೆ ಮೇಲೆ ನಡೆದಾಡುವುದಕ್ಕೆ ಜನ ಭಯ ಪಡುತ್ತಿದ್ದಾರೆ ಕೂಡಲೆ ಈ ಸಂಬಂಧ ಪಟ್ಟ ಅಧಿಕಾರಿಗಳು ಇನ್ನೂ ಯಾವುದೇ ಅನಾಹುತ ಸಂಭವಿಸುವ ಮುನ್ನ ಭೇಟಿ ನೀಡಿ ಕಾರ್ಯಚರಣೆ ಕೈ ಗೊಳ್ಳಲು ಶರಣಬಸಪ್ಪ ಎಲ್ಹೇರಿ ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ತಾಲೂಕಿನ ಅಧ್ಯಕ್ಷರು ಮನವಿ ಮಾಡಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















