ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಜ್ಜನರ ಸಂಗದಿಂದ ಚೈತನ್ಯದ ಬದುಕು : ಶ್ರೀ ಚಂದ್ರಶೇಖರ ಶ್ರೀಗಳು

ಬಾಗಲಕೋಟೆ/ ಜಮಖಂಡಿ :ಸತ್ಸಂಗದಲ್ಲಿ ಸದ್ಗತಿ ಇದೆ ಸತ್ಯಾಸತ್ಯತೆ, ಸಜ್ಜನಿಕೆಯ ಸಾರವೇ ಅಡಗಿದೆ, ಮನುಷ್ಯನನ್ನು ಸವಿ ಬದುಕಿನತ್ತ ಕರೆದುಕೊಂಡು ಹೋಗುವ ಸತ್ಸಂಗವು ಮಾನವನು ಹೇಗೆ ಸಂತೃಪ್ತ ಬದುಕನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಕಲಿಸುತ್ತದೆ ಎಂದು ಪರಮಪೂಜ್ಯ ಪಾವನ ಮೂರ್ತಿಗಳಾದ ಯಡಹಳ್ಳಿ ಚಂದ್ರಶೇಖರ ಶ್ರೀಗಳು ಅಭಿಪ್ರಾಯ ಪಟ್ಟರು. ಮುಧೋಳ ತಾಲೂಕಿನ ಯಡಹಳ್ಳಿ ಇಂಗಳಗಿಯ ಶ್ರೀಅಡವಿ ಸಿದ್ದೇಶ್ವರ ಮಠದಲ್ಲಿ ಇತ್ತೀಚಿಗೆ ನಡೆದ “ಗುರುಸ್ಮರಣೆ” ಕಾರ್ಯಕ್ರಮದ ಪಾವನ ಸನ್ನಿಧಾನವನ್ನು ವಹಿಸಿ ಮಾತನಾಡಿ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕಾದರೆ ಬದುಕಿನೊಳಗೆ ಸಹನೆ ಸೌಹಾರ್ದತೆ, ಸದುವಿನಯ, ನಿರಂತರ ಕ್ರಿಯಾಶೀಲವಾಗಿ ಇರಬೇಕಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು ಮಾತನಾಡಿ ಸತ್ಸಂಗದೊಳಗೆ ಮನುಷ್ಯ ಬದುಕುವುದನ್ನು ಗಳಿಸಿಕೊಳ್ಳುವುದೇ ಸಿರಿತನ. ಬದುಕುವ ರೀತಿ ನೀತಿಗಳು ಎಚ್ಚರಿಕೆ ತಪ್ಪಿದ್ದರಿಂದಲೇ ಸಜ್ಜನಿಕೆ ಸದ್ಭಾವಗಳಿಗೆ ಅವಕಾಶ ದೊರೆಯುತ್ತಿಲ್ಲ. ಸಜ್ಜನ ಸದ್ಭಾವಗಳನ್ನು ರೂಢಿಸಿಕೊಂಡು ಬಾಳುವುದೇ ಯಶಸ್ವಿನಿ ಒಳಗುಟ್ಟಾಗಿದೆ ಎಂದರು. ಜಗದ್ಗುರು ಶ್ರೀ ರೇಣುಕಾಚಾರ್ಯ ಶ್ರೀಮಠದ ಕುಮಾರ ಶ್ರೀಗಳು ಸಜ್ಜನರ ಸಂಗದಿಂದ ಸದ್ಗುಣಗಳು ಪ್ರಾಪ್ತಿಯಾಗುತ್ತವೆ ಎಂದರು. ಸೇವಾ ಧುರೀಣರಾದ ಸದಾಶಿವ ಜಮಖಂಡಿ ಅವರು ಚಂದ್ರಶೇಖರ ಶ್ರೀಗಳ ಪಾದಪೂಜೆ ಮಾಡಿ ಶ್ರೀಗಳನ್ನು ಗೌರವಿಸಿ ಆಶೀರ್ವಾದ ಪಡೆದುಕೊಂಡರು. ಗಣೇಶ ಶಾಸ್ತ್ರಿಗಳು ಸಂಚಾಲಕರಾಗಿ ಕಾಯ೯ ನಿವ೯ಹಿಸಿದರು. ನೆರೆದ ಭಕ್ತಸ್ತೋಮಕ್ಕೆ ಸದಾಶಿವ ಜಮಖಂಡಿ ಪ್ರಸಾದ ವ್ಯವಸ್ಥೆ ಮಾಡಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!