ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿಕ್ಷಕನ ಕೈಯಲ್ಲಿ ಅರಳಿದ ಶಿಷ್ಯನ ಭಾವಚಿತ್ರ

ಬಾಗಲಕೋಟೆ :ಮನುಷ್ಯ ಜೀವನದ ಉತ್ತಮ ರೂಪ ಸಂಸ್ಕೃತಿ, ಸಂಸ್ಕೃತಿಯ ಉತ್ತಮ ರೂಪ ಕಲೆ, ಚಿತ್ರಕಲೆ ಶಿಲ್ಪಕಲೆ ದ್ರಶ್ಯಕಲೆ ಸೇರಿದಂತೆ ಮುಂತಾದ ಕಲೆಗಳು ಹೆಚ್ಚು ಪ್ರಾಧಾನ್ಯತೆ ಪಡೆದಿವೆ.
ಬುದ್ದಿಜೀವಿಗಳದ್ದು ಆಲೋಚನೆ ಹೃದಯ ಜೀವಿಗಳದ್ದು ರಸಾನುಭವ ಎಂಬಂತೆ ಚಿತ್ರಕಲೆ ಒಂದು ವಿಶ್ವ ಭಾಷೆ, ಬಲ್ಲವನೆ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಚಿತ್ರಕಲೆಯ ಸವಿಯು ಸವಿದವನಿಗೆ ಗೊತ್ತು, ಮಾನವನ ವಿಶಿಷ್ಟ ಚಟುವಟಿಕೆಯೇ ಕಲೆ ಎನ್ನುವ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಸೃಜನಶೀಲ ಚಿತ್ರಕಲಾ ಶಿಕ್ಷಕರಾದ ಎಸ್ ಎಸ್ ಗೌಡರ ರವರು ತಮ್ಮ ಪ್ರೀತಿಯ ಅಚ್ಚು ಮೆಚ್ಚಿನ ಶಿಷ್ಯ ಈ ಸಲದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಕು.‌ ಪ್ರಥ್ವಿರಾಜ ವಿರೇಶ ಶಿಂಪಿ ಹಾಗೂ ಶ್ರೀಕಾಂತ ಹೆಸರೂರಮಠ ರವರ ಭಾವಚಿತ್ರವನ್ನು ಪೆನ್ಸಿಲನಿಂದ ಬಿಡಿಸಿ ಕಲೆಯ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಯಾವುದೇ ಚಿತ್ರವಿದ್ದರೂ ಅದನ್ನು ತಮ್ಮ ಕೈಯಲ್ಲಿ ಅದರಂತೆ ಬಿಡಿಸುವ ಸಾಮರ್ಥ್ಯ ಹೊಂದಿರುವ ಇವರು ಯಾವುದೇ ಕಾರ್ಯಕ್ರಮ ನಡೆದರೂ ಅದರಲ್ಲಿ ಇವರದೇ ಆದ ಹೊಸ ಆವಿಷ್ಕಾರ ಇರುತ್ತದೆ ಶಾಲೆಯಲ್ಲಿ ನೆಡೆಯುವ ಧ್ವಜಾರೋಹಣ, ಕ್ರೀಡಾಕೂಟ ಸಾoಸ್ಕೃತಿಕ ಕಾರ್ಯಕ್ರಮಗಳಲ್ಲಿ ಅದಕ್ಕೆ ಸಂಬಂಧಿಸಿದ ಹೊಸದೊಂದು ಆವಿಷ್ಕಾರ ಇರುತ್ತದೆ, ಚಿತ್ರಕಲೆಯನ್ನು ವಿನೂತನ ಮಾದರಿಯ ಹೊಸ ವಿನ್ಯಾಸದತ್ತ ಅರಳಿಸುವದು ಇವರ ಹವ್ಯಾಸ, ಚಿತ್ರಕಲೆಯಿಂದ ಇವರು ಕಂದಗಲ್ಲ ಗ್ರಾಮ ಹಾಗೂ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಸದಾ ಹಸನ್ಮುಖಿಯಾಗಿರುವ ಗೌಡರ ಗುರುಗಳಿಗೆ ಚಿತ್ರಕಲೆ ನೀರು ಕುಡಿದಷ್ಟೇ ಸುಲಭ, ಎಸ್ ಎಸ್ ಗೌಡರ್ ಗುರುಗಳನ್ನು ಶಾಲಾ ಅಭಿವೃದ್ಧಿ ಸಮಿತಿಯವರು ಎಲ್ಲಾ ಗುರುಗಳು ಕಂದಗಲ್ಲ ಗ್ರಾಮಸ್ಥರು, ಅಭಿನಂದಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!