ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಕಮರಿ ಗ್ರಾಮ ಪಂಚಾಯತಿಯಲ್ಲಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಊರಿನ ಹಿರಿಯರ ಸಮ್ಮುಖದಲ್ಲಿ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಮಾಡುವುದರ ಮುಖಾಂತರ ಜಯಂತಿಯನ್ನು ಆಚರಿಸಲಾಯಿತು.
ಇದೇ ವೇಳೆ ಕಕಮರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪುಷ್ಪ ಒಡೆಯರ್, ಅಧಿಕಾರಿಗಳಾದ ಸವಿತಾ ಬೆಳಗಾವೆ, ಅಲೀಫ್ ಅರಟಾಳ, ಹನುಮಂತ ಸಿಂದೂರ್, ಅನಂತ್ ಬೌಡೇಕರ್, ದರೆಪ್ಪ ಮಾಂಗ್, ರಾಜು ಭಜಂತ್ರಿ, ಕುಮಾರ್ ಪಾಟೀಲ್, ಅನುಸೂಯ ಬಸರ್ಗಿ, ಇನ್ನೂ ಅನೇಕ ಗ್ರಾಮಸ್ಥರು ಹಿರಿಯರು ಉಪಸ್ಥಿತರಿದ್ದರು.
ವಿಶ್ವಕರ್ಮ ಜಯಂತಿ ವಿಶೇಷವೇನೆಂದರೆ, ವಿಶ್ವಕರ್ಮ ಜಯಂತಿಯಂದು ವಿಶ್ವಕರ್ಮರ ಪೂಜೆ ಮಾಡಲಾಗುತ್ತದೆ. ಭಗವಾನ್ ವಿಶ್ವಕರ್ಮರನ್ನು ಇಂಜಿನಿಯರಗಳು, ಕುಶಲಕರ್ಮಿಗಳು, ವಾಸ್ತುಶಿಲ್ಪಿಗಳು, ಯಂತ್ರಶಾಸ್ತ್ರಜ್ಞರು, ಯಂತ್ರಗಳೊಂದಿಗೆ ಕೆಲಸ ಮಾಡುವ ಎಲ್ಲಾ ಜನರು ಇವರನ್ನು ವಿಶೇಷವಾಗಿ ಪೂಜಿಸುತ್ತಾರೆ. ವಿಶ್ವಕರ್ಮ ಅವರು ಶಿಲ್ಪಕಲೆಗಳ ದೇವರು ಎಂದು ಕರೆಸಿಕೊಂಡಿದ್ದು, ಇವರನ್ನು ದೇವಶಿಲ್ಪಿ ಎಂದು ಕರೆಯುತ್ತಾರೆ.
ವರದಿ. ವಿಠ್ಠಲ ಖೋಕಾಟೆ ಅಥಣಿ



















