ಜಾತ್ರೆಯ ಹರುಷ ಪ್ರತಿ ವರುಷ ಮರಳಿ ಮರಳಿ ಬರುವುದು ನಮ್ಮಯ ತನುಮನ ಪುಳಿಕಿತ ಗೊಳಿಸುತ ನವ ಚೈತನ್ಯವ ತುಂಬುವುದು
ಪಟಾಕಿ ಮದ್ದಿನ ಬಿರುಸಿನ ಸದ್ದು ಭಕ್ತರು ಕೇಳಿ ನಲಿಯುವರು ಬಾನಿಗೆ ಹಾರುವ ಬಣ್ಣಿನನ ಬಾಣವ ನೋಡಿ ಎಲ್ಲರೂ ಕುಣಿಯವರು
ಸುತ್ತುವ ಜೇಕಲಿ ಮಕ್ಕಳು ಕುಳಿತು ಕೇಕೆ ಹಾಕಿ ಹಾಡುವರು ಬಾನಲಿ ತೇಲುವ ತೊಟ್ಟಿಲಲ್ಲಿ ಕುಳಿತು ಕೊಂಡು ನಲಿಯುವರು
ಹಲವು ಬಗೆಯ ಆಟಿಕೆ ವಸ್ತು ರಂಗು ರಂಗಿನ ಬಳೆಗಳ ಸಂತೆ ನೋಡಲು ಕೊಳ್ಳಲು ಬರುವರು ಜನರು ಮರೆತು ತಮ್ಮಯ ನಿತ್ಯದ ಚಿಂತೆ
ಕಂಠಮಾಲೆಯು ರಥಕ್ಕೆ ಕಟ್ಟುತ ಹಾಲಾಗಿ ಜೇನಾಗಿ ಎಲ್ಲರೂ ಬೆರೆತು ಪೂಜೆಗೆ ತರುವರು ಕರ್ಪೂರ ಕಾಯಿ ಹಿಂದು ಮುಸ್ಲಿಮ್ ಭೇದವ ಮರೆತು
ರಥದಲ್ಲಿ ಕಾಡ ಸಿದ್ಧನ ಮೂರ್ತಿ ಅದೆಷ್ಟು ಸುಂದರ ಕಾಣುವುದು ಮನದಲ್ಲಿ ಪೂಜ್ಯ ಭಾವನೆ ಬೆಳೆಸಿ ಆತ್ಮಾನಂದವ ನೀಡುವುದು
ರುಚಿಕರ ನಮ್ಮ ಅವಲಕ್ಕಿ ಚೂಡಾ ಬೆಲ್ಲಶ್ ಬರ್ಫಿ ಪೇಡೆ ಕುಂದಾ ಬನಹಟ್ಟಿ ಜಾತ್ರೆಯ ಸೊಬಗನು ಸಾರುತ “ತಮ್ಮ”ನು ರಚಿಸಿದ ಈ ಕವನಂದಾ
ರಚನೆ: ಶಮಶೋದ್ದಿನ್ ಶಮ್ನಿಯಾಜಿ (ಝಾರೆ ಸರ್) ಶಾಂತಿ ನಗರ ಬನಹಟ್ಟಿ-587 311
ಮೊ: 7259863787




















