ಬಳ್ಳಾರಿ / ಕಂಪ್ಲಿ : ಪಟ್ಟಣದ ಸಿದ್ದಿವಿನಾಯಕ ದೇವಸ್ಥಾನ ಬಳಿಯ ಕಂಪ್ಲಿ-ಗಂಗಾವತಿ ಸಂಪರ್ಕದ ಮುಖ್ಯರಸ್ತೆಯಲ್ಲಿರುವ ವಿಜಯನಗರ ಉಪ ಕಾಲುವೆಯ ಕಿರು ಸೇತುವೆಯ ರಸ್ತೆ ಮಧ್ಯದಲ್ಲಿ ಬೋಂಗ ಬಿದ್ದಿದ್ದು, ಅಪಘಾತಕ್ಕೆ ಆಹ್ವಾನಿಸುವಂತಿದೆ.
ಇಲ್ಲಿನ ರಸ್ತೆಯಲ್ಲಿ ಕಂಪ್ಲಿ-ಗಂಗಾವತಿ ಸಂಪರ್ಕದಿಂದ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದು, ಇಲ್ಲಿನ ಕಾಲುವೆಯ ಮುಖ್ಯರಸ್ತೆ ಮಧ್ಯದಲ್ಲಿ ದೊಡ್ಡ ಬೋಂಗ ಬಿದ್ದಿದ್ದು, ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಅನಿವಾರ್ಯತೆ ಉಂಟಾಗಿದೆ.
ಇಲ್ಲಿನ ರಸ್ತೆಯ ಕಿರು ಸೇತುವೆಯ ಎಡ ಮತ್ತು ಬಲಗಡಿಗೆ ರಕ್ಷಣಾ ಕಂಬಿಗಳಿಲ್ಲದಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಕಿರು ಸೇತುವೆ ಎತ್ತರಿಸದ ಪರಿಣಾಮ ಸಾಕಷ್ಟು ತೊಂದರೆ ಉಂಟಾಗಿದ್ದು, ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.
ಮುಂದಿನ ಅವಘಡಕ್ಕೆ ಎಡೆ ಮಾಡಿಕೊಡದೆ, ಸಂಬಂಧಿಸಿದ ಅಧಿಕಾರಿಗಳು ಎಚ್ಚರವಹಿಸಿ, ಇಲ್ಲಿನ ರಸ್ತೆಯಲ್ಲಿ ಬಿದ್ದಿರುವ ಬೋಂಗವನ್ನು ಮುಚ್ಚಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಪ್ರತಿಯೊಬ್ಬರ ಆಶಯವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















