ರಾಯಚೂರಿನ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತ ಇಲಾಖೆ ರಾಯಚೂರು ಹಾಗೂ ವಿವಿಧ ವಿಶ್ವಕರ್ಮ ಸಂಘ ಸಂಸ್ಥೆಗಳ ಸಯುಕ್ತಶ್ರಯದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ ಹಾಗೂ ವಿಶ್ವಕರ್ಮ ಸಮಾಜ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಿಂಧನೂರು ತಾಲೂಕಿನ ತುರವಿಹಾಳ ಸಮೀಪದ ಕೆ ಹೊಸಹಳ್ಳಿ ಗ್ರಾಮದ ಚನ್ನಪ್ಪ ವಿಶ್ವಕರ್ಮ ಅವರು ವನಸಿರಿ ಪೌಂಡೇಷನ್ ರಾಜ್ಯ ಜಾಲತಾಣ ಅಧ್ಯಕ್ಷರಾಗಿ ಪರಿಸರ ಸೇವೆ ಮತ್ತು ಸಿಂಧನೂರು ತಾಲೂಕ ವಿಶ್ವಕರ್ಮ ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವಕರ್ಮ ಸಮಾಜದ ಸಂಘಟನೆಯ ಸೇವೆಯನ್ನು ಗುರುತಿಸಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಪರಮ ಪೂಜ್ಯ ಶ್ರೀ ಅಜೇಂದ್ರ ಮಹಾಸ್ವಾಮಿಗಳು ದೇವದುರ್ಗ ಮಠ,ರಾಯಚೂರು ಉಪ ತಹಸೀಲ್ದಾರ್ ಪರುಶುರಾಮ,ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಅಧ್ಯಕ್ಷ ಬ್ರಹ್ಮ ಗಣೇಶ ವಕೀಲರು,ಜಿಲ್ಲಾ ವಿಶ್ವಕರ್ಮ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಕೆ.ರಾಮು ಗಾಣದಾಳ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಆನ್ವರಿ,ಮುಖಂಡರಾದ ಮನೋಹರ್ BSNL,ಈಶ್ವರ ವಿಶ್ವಕರ್ಮ,ಮಾಜಿ ತಾಪಂ ಅಧ್ಯಕ್ಷ ಶ್ರೀಮತಿ ಜಯಮ್ಮ ಕೆ ನರಸಣ್ಣಾಚಾರಿ ಗಾಣಧಾಳ, ಡಾ.ಮನೋಹರ್ ಪತ್ತಾರ,ನಾಗರಾಜ ಪತ್ತಾರ,ಡಾ.ಅರುಣ್ ಮಸ್ಕಿ ರಾಘು ಜಾಲಿಹಾಳ, ವೀರೇಶ ಜಾಲಿಹಾಳ ಇನ್ನಿತರರು ಇದ್ದರು.
- ಕರುನಾಡ ಕಂದ



















