ಶಿವಮೊಗ್ಗ : ನಗರದ ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸೆ.೨೨ ರಿಂದ ಅ.೦೨ರವರೆಗೆ ಸಂಭ್ರಮದ ಶರನ್ನವರಾತ್ರಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಸೆ. ೨೨ರಂದು ದೇವಿಗೆ ಅರಿಶಿನಿ ಕುಂಕುಮ ಅಲಂಕಾರ, ಬೆಳಿಗ್ಗೆ ೯.೩೦ ರಿಂದ ಶ್ರೀ ದುರ್ಗಾಹೋಮ, ೧೨.೩೦ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ.
ಸಂಜೆ ೬.೩೦ ರಿಂದ ದುರ್ಗಾ ದೀಪ ನಮಸ್ಕಾರ , ಸಂಜೆ ೮.೦೦ ರಿಂದ ದೇವಿಗೆ ಉಯ್ಯಾಲೇ ಸೇವೆ ೮.೩೦ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ
ಪ್ರತಿನಿತ್ಯ ದೇವಿಗೆ ವಿವಿಧ ಅಲಂಕಾರ, ಬೆಳಿಗ್ಗೆ ೭.೩೦ ರಿಂದ ಚಂಡಿಕಾಪಾರಾಯಣ , ೯.೩೦ ರಿಂದ ಹೋಮ ಪ್ರಾರಂಭ ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ.
ಪ್ರತಿನಿತ್ಯ ಸಂಜೆ ೬.೩೦ ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ : ಚೇತನಭಟ್ ೯೯೮೦೨೪೭೦೮೧, ಕೆ. ಶೇಖರ್ ೯೪೪೮೮೮೮೧೨೯ ಸಂಪರ್ಕಿಸಬಹುದು.
ವರದಿ: ಕೊಡಕ್ಕಲ್ ಶಿವಪ್ರಸಾದ್




















