
ಕಲ್ಯಾಣ ಪಥ ರಸ್ತೆ ಕಾಮಗಾರಿಗೆ ಅಡಿಗಲ್ಲು ಹಾಕಿದ ಸಚಿವ ಡಾ. ಶರಣಪ್ರಕಾಶ ಪಾಟೀಲ
ಕಲಬುರಗಿ/ಸೇಡಂ :2024-25ನೇ ಸಾಲಿನ ಕಲ್ಯಾಣ ಪಥ ಯೋಜನೆ ಅಡಿಯಲ್ಲಿ ಸೇಡಂ ತಾಲೂಕಿನ ಊಡಗಿ ಗ್ರಾಮದಿಂದ ಮಳಖೇಡ ಸ್ಟೇಷನ್ ತಾಂಡಾವರೆಗೆ 3.7 ಕೋಟಿ ರೂಗಳ ಹಂಗನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅಡಿಗಲ್ಲು ನೆರವೇರಿಸಿದರು.
ಕಲ್ಯಾಣ ಪಥ ಯೋಜನೆ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಕೆ.ಕೆ.ಆರ್.ಡಿ.ಬಿಯಿಂದ ಪ್ರತ್ಯೇಕ ಅನುದಾನವು ಸಹ ಬಿಡಗಡೆಗೊಳಿಸಲಾಗುತ್ತಿದೆ.
ಊಡಗಿಯಿಂದ ಮಳಖೇಡ ಸ್ಟೇಷನ್ ತಾಂಡಾದ ಹಂನಗಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಊಡಗಿ ಮತ್ತು ಮಳಖೇಡ ಸ್ಟೇಷನ್ ತಾಂಡಾದ ಸಾರ್ವಜನಿಕರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.
. ಕರುನಾಡ ಕಂದ



















