
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಶ್ರೀ ಮಾತಾ ಮಹಿಳಾ ಅರ್ಬನ್ ಕೋ – ಆಫ್ ಕ್ರೆಡಿಟ್ ಸೊಸೈಟಿ ಇದರ ರಜತ ಮಹೋತ್ಸವ ಮತ್ತು 25 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದಿವ್ಯಸಾನಿಧ್ಯವನ್ನು ಮಾತೋಶ್ರೀ ಅನುಸೂಯಾದೇವಿ, ಶ್ರೀ ಸಿದ್ಧಲಿಂಗಮಠ ಶಾಂಭವಿ ಆಶ್ರಮ ತುಂಗಳ, ಮಾತೋಶ್ರೀ ಸುವರ್ಣಾತಾಯಿ ಹೊಸಮಠ ಗೋಕಾಕ ಮತ್ತು ಸೊಸೈಟಿ ಅಧ್ಯಕ್ಷೆಯರಾದ ಶ್ರೀಮತಿ ಯಲ್ಲವ್ವ ಖೋತ, ಉಪಾಧ್ಯಕ್ಷರಾದ ಶ್ರೀಮತಿ ಪಾರ್ವತಿ ಬೆಳ್ಳಂಕಿ ಹಾಗೂ ಸದಸ್ಯೆಯರಾದ ಶ್ರೀಮತಿ ಬಸವ್ವಾ ಗಲಗಲಿ, ಶ್ರೀಮತಿ ಶೋಭಾ ಖೋತ, ಶ್ರೀಮತಿ ಮುರುಗೆವ್ವ ಖೋತ, ಶ್ರೀಮತಿ ಸಾವಿತ್ರಿ ಖೋತ, ಶ್ರೀಮತಿ ಅನ್ನಪೂರ್ಣ ಹುಲ್ಯಾಳ ಹಾಗೂ ಸೊಸೈಟಿ ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಮತ್ತು ಗ್ರಾಮದ ಹಿರಿಯ ಮುಖಂಡರು ಮತ್ತು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ವರದಿ ವಿಠ್ಠಲ ಖೋಕಾಟೆ



















