ಬೆಂಗಳೂರು: ಮಾತಿನ ಮನೆಯಲ್ಲಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ರಂಗಪುತ್ತಳಿ ಯಶೋಧ ತಂಡದವರಿಂದ ಮಹಿಷ ಸಂಹಾರ ತೊಗಲು ಗೊಂಬೆಯಾಟ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಇದರ ಜೊತೆಗೆ ಡಾ. ಆರ್. ಶೈಲಜಾ ಶರ್ಮ ಅವರ ಇಂಚರ ಕೃತಿಯನ್ನು ನೊಬಲ್ ಹಾರ್ಟ್ಸ್ ನ ಸತ್ಯಪ್ರಸಾದ್ ಲೋಕಾರ್ಪಣೆ ಮಾಡಿದರು.
ಸಾಂಪ್ರದಾಯಿಕ ಕಲೆಯಾದ ತೊಗಲುಗೊಂಬೆಯಾಟವನ್ನು ಜನಮನಕ್ಕೆ ಹತ್ತಿರ ತಲುಪಿಸುವ ಹಾಗೂ ಉಳಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ ಎಂದು ಮಾತಿನ ಮನೆಯ ರಾ ಸು ವೆಂಕಟೇಶ ತಿಳಿಸಿದರು.
ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಶ್ರೀ ಎಸ್ ಎಲ್ ಬೈರಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ರಾಧಾ ಕೇಶವ ಹೆಬ್ಬಾರ್ ನಿರ್ಬಹಿಸಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















