
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ನಿಟ್ಟೂರ (ಬಿ.) ಗ್ರಾಮದ ಮಾಂಜರಾ ನದಿಯ ಅಣೆಕಟ್ಟು ಸಂಪೂರ್ಣ ಜಲಾವೃತಗೊಂಡಿದೆ ದಿನಾಂಕ 29/09/2025 ರಂದು ಮಹಾರಾಷ್ಟ್ರ ಮೂಲದಿಂದ ಅತಿ ಹೆಚ್ಚು ಪ್ರಮಾಣದಲ್ಲಿ ನೀರನ್ನು ಬಿಡಲಾಗಿದೆ ಆದ ಕಾರಣ ಬೀದರ್ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವ ನೀಡೋದಾ, ನಿಟ್ಟೂರ(K), ಹಜನಾಳ, ಚಂದಾಪುರ, ಸೇರಿದಂತೆ ಹಲವು ಗ್ರಾಮಗಳು ನದಿ ತೀರದ ಹೊಲಗದ್ದೆಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದೆ ಹಾಗೆ ಸಾಕಷ್ಟು ಪ್ರಮಾಣದಲ್ಲಿ ರೈತರ ಬೆಳೆ ಹಾನಿಯಾಗಿದೆ, ಎಚ್ಚರಿಕೆಯ ಸೂಚನೆ ಮೇರೆಗೆ ನದಿ ತೀರದಲ್ಲಿ ಗ್ರಾಮಸ್ಥರು ಹಾಗೂ ತಮ್ಮ ಜಾನುವಾರು, ಹೋಗದಂತೆ ನೋಡಿಕೊಳ್ಳಬೇಕು ನಿನ್ನೆ ಬೆಳಿಗ್ಗೆ ಸಮಯ 8:30 ಗೆ ಭಾಲ್ಕಿ ತಾಲೂಕಿನ ತಹಶೀಲ್ದಾರರಾದ ಮಲ್ಲಿಕಾರ್ಜುನ ವಡ್ಡನ್ಕೆರೆ ಹಾಗೂ ಕುಶನೂರು PSI ಹಾಗೂ ಧನೂರ PSI ಅವರು ನಿಟ್ಟೂರ (ಬಿ.) ಅಣೆಕಟ್ಟಿಗೆ ಭೇಟಿ ನೀಡಿ ಜನರನ್ನು ನದಿ ತೀರಕ್ಕೆ ಬಾರದಂತೆ ಬ್ಯಾರಿಕೇಡನ್ನು ಹಾಕಲಾಯಿತು, ಮಧ್ಯಾಹ್ನ 2:30 ಗಂಟೆಗೆ ಬಿಜೆಪಿಯ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಚಲವಾದಿ ನಾರಾಯಣ, ಅವರು ಬೀದರ್ ಜಿಲ್ಲೆಯ ಬಿಜೆಪಿ ಶಾಸಕರು ನಿಟ್ಟೂರಿನ ಮಾಂಜರಾ ನದಿಗೆ ಭೇಟಿ ನೀಡಿದರು.
ವರದಿಗಾರರು ಗಜಾನಂದ ಪಾಟೀಲ, ನಿಟ್ಟೂರ (ಬಿ.)



















