ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ವಿವಿಧ ಕನ್ನಡಪರ ಸಂಘಟನೆಗಳಿಂದ ಧ್ವಜಸ್ತಂಬ ನಿರ್ಮಾಣಕ್ಕೆ ಸ್ಥಳಾವಕಾಶ ಮಾಡಿಕೊಡುವಂತೆ ಗ್ರಾ.ಪಂ ಅಧ್ಯಕ್ಷೆ ಶಾರದಾ ಮತ್ತು ಪಿಡಿಒ ಶೇಷಗಿರಿ ರಾವ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ತಾಲೂಕು ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ರಾಮಪ್ಪ ಮಾತನಾಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ಮೊದಲು ಧ್ವಜಸ್ತಂಬ ನಿರ್ಮಿಸಲಾಗಿತ್ತು ಈ ಮೂಲಕ ಪ್ರತಿಯೊಂದು ದಿನಾಚರಣೆಗಳನ್ನು ನಡೆಸಲಾಗುತ್ತಿತ್ತು ಆದರೆ ರಸ್ತೆಯ ಅಗಲೀಕರಣದಿಂದ ಧ್ವಜಸ್ತಂಬ ತೆರವುಗೊಳಿಸಲಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮದ ರೆಡ್ಡಿ ಓಣಿಯ ಮುಂಭಾಗದಲ್ಲಿ ಫಲ ಇದ್ದು ಧ್ವಜಕಟ್ಟೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. ನಂತರ ಮನವಿ ಪತ್ರ ಸ್ವೀಕರಿಸಿ ಪಿಡಿಒ ಶೇಷಗಿರಿ ರಾವ್ ಮಾತನಾಡಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಎಲ್ಲರ ಒಪ್ಪಿಗೆ ಪಡೆದು ಧ್ವಜ ಕಟ್ಟೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಚ್ ಗಾದಿಲಿಂಗಪ್ಪ , ಈರಮ್ಮ, ಪ್ರಮುಖರಾದ ಟಿ ರಾಮಪ್ಪ ಎಚ್ ಮಲ್ಲೇಶ್ ಬಡಿಗೇರ್ ವೀರೇಶ್ ಪಂಪಾಪತಿ ಹಂಚಿನಾಳ ಪಿರ ಸಾಬ್ ಗ್ರಾ.ಪಂ ಸದಸ್ಯರು, ಸಿಬ್ಬಂದಿ, ಸಂಘಟನೆಯ ಪದಾಧಿಕಾರಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















